Get Updates
Get notified of breaking news, exclusive insights, and must-see stories!

ಶೇಷಗಿರಿರಾಯರಿಗೆ ಕಾರಂತ, ಮಲ್ಲಿಕಾ ಘಂಟಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ

ಸಾಲಿಗ್ರಾಮ : ಇಲ್ಲಿನ ಡಾ। ಕೋಟ ಶಿವರಾಮ ಕಾರಂತ ಮೆಮೋರಿಯಲ್‌ ಫೌಂಡೇಶನ್‌ನ ಡಾ। ಕಾರಂತ ಪ್ರಶಸ್ತಿ ಸನ್ಮಾನಕ್ಕೆ ಹಿರಿಯ ವಿಮರ್ಶಕ ಪ್ರೊ। ಎಲ್‌. ಎಸ್‌. ಶೇಷಗಿರಿರಾವ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಅಕ್ಟೋಬರ್‌ 14ರಂದು ಸಾಲಿಗ್ರಾಮದಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಶೇಷಗಿರಿರಾವ್‌ ಅವರಿಗೆ ಕಾರಂತ ಪ್ರಶಸ್ತಿ ಪ್ರದಾನ ಮಾಡಲಿರುವುದಾಗಿ ಫೌಂಡೇಷನ್‌ನ ಪ್ರಕಟಣೆ ಹೇಳಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಭುತ್ವ ಪಡೆದಿರುವ ಶೇಷಗಿರಿರಾವ್‌ ಅವರು ಪ್ರಸ್ತುತ ಬಿರ್ಲಾ ಫೌಂಡೇಶನ್‌ನ ನಾಲ್ಕು ಸಂಪುಟಗಳ ಇಂಗ್ಲಿಷ್‌ ಮಹಾಭಾರತದ ರಚನೆಯಲ್ಲಿ ತೊಡಗಿದ್ದಾರೆ.

ಮಲ್ಲಿಕಾ ಘಂಟಿ ಅವರಿಗೆ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ

ಧಾರವಾಡ:ಬಳ್ಳಾರಿಯ ಸಂಡೂರು ಹಳ್ಳಿ ಮಲ್ಲಿಕಾ ಘಂಟಿ ಅವರ ತನು ಕರಗದವರಲ್ಲಿ ಪುಸ್ತಕ ಈ ವರ್ಷದ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ ಮಹಿಳಾ ಲೇಖಕಿಯರಿಗೆ ಈ ಪ್ರಶಸ್ತಿಯನ್ನು ನೀಡುತ್ತಿದ್ದು ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಸೂರ್ಯನಾಥ ಕಾಮತ್‌ಗೆ ಪೊಳಲಿ ಶೀನಪ್ಪ ಹೆಗ್ಗಡೆ ಸನ್ಮಾನ

ಉಡುಪಿ : ಪ್ರಸಿದ್ಧ ಸಂಶೋಧಕ ಡಾ. ಸೂರ್ಯನಾಥ ಕಾಮತ್‌ ಅವರಿಗೆ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದಲ್ಲಿ ನಡೆದ ತುಳು ದಿನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಡಾ. ಸೂರ್ಯನಾಥ ಕಾಮತ್‌ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಿಂದ ತಾವು ಆಕರ್ಷಿತರಾದ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು. ತುಳುನಾಡಿನ ಇತಿಹಾಸಕ್ಕೆ ತಳಪಾಯ ಹಾಕಿದ ಪೊಳಲಿ ಶೀನಪ್ಪ ಹೆಗ್ಗಡೆ ಅವರ ಹೆಸರಿನಲ್ಲಿ ನೀಡುತ್ತಿರುವ ಈ ಪ್ರಶಸ್ತಿ ಪಡೆದ ಬಗ್ಗೆ ಕಾಮತರು ಸಂತೋಷ ವ್ಯಕ್ತ ಪಡಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+