ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪೊಲೀಸರ ಸರ್ಪಕಾವಲಿನಲ್ಲಿ ಶಾಂತಿದೂತನಿಗೆ ಇನ್ನೊಂದು ಹೂವು
ನವದೆಹಲಿ : ಗಾಂಧೀಜಿ ಅವರ 132 ನೇ ಜಯಂತಿ ಆಚರಣೆಯ ಪ್ರಯುಕ್ತ ರಾಷ್ಟ್ರಪತಿ ಕೆ.ಆರ್.ನಾರಾಯಣ್, ಉಪರಾಷ್ಟ್ರಪತಿ ಕೃಷ್ಣ ಕಾಂತ್, ಪ್ರಧಾನಿ ವಾಜಪೇಯಿ ಅವರು ರಾಜ್ಘಾಟ್ನಲ್ಲಿನ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
ಗೃಹ ಸಚಿವ ಎಲ್.ಕೆ. ಅಡ್ವಾನಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಇತರ ಕೇಂದ್ರ ಸಚಿವರು ಗಾಂಧಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ರಾಜ್ಘಾಟ್ಗೆ ಹಿಂದೆಂದಿಗಿಂತಲೂ ಬಿಗಿ ಬಂದೋಬಸ್ತ್ ಕಲ್ಪಿಸಿದ್ದುದು ಗಮನ ಸೆಳೆಯುವಂತಿತ್ತು . ರಾಜ್ಘಾಟ್ ಸುತ್ತಮುತ್ತ ಅರ್ಧ ಕಿಮೀ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್ಗೆ ನಿಷೇಧ ಹೇರಲಾಗಿತ್ತು .
ಭಾರತದಲ್ಲಿನ ಅಮೆರಿಕಾದ ರಾಯಭಾರಿ ರಾಬರ್ಟ್ ಡಿ ಬ್ಲಾಕ್ವಿಲ್ ಹಾಗೂ ಪಾಕಿಸ್ತಾನ ಹೈ ಕಮೀಷನರ್ ಕ್ವಾಜಿ ಅಶ್ರಫ್ ಜಹಂಗೀರ್ ಅವರು ಕೂಡ ರಾಜ್ಘಾಟ್ಗೆ ಭೇಟಿ ನೀಡಿ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು.
(ಪಿಟಐ)
Comments
Story first published: Tuesday, October 2, 2001, 5:30 [IST]