Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ಮಳೆ ಬಂದಿದೆ ಎಂದರೆ ಮನ ತುಂಬ ಖುಷಿ ಅಲ್ಲವಾ ?

ಬೆಂಗಳೂರು : ಮಳೆ ಬಂದಿದೆ. ಕರಾವಳಿಯಿಂದ ಹಿಡಿದು ಕೋಲಾರದ ಪುಟ್ಟ ಹಳ್ಳಿಯವರೆಗೆ ಮಳೆ ದಯಮಾಡಿಸಿದೆ. ಬೆಂಗಳೂರು ನಗರದಲ್ಲಂತೂ ಶಾಲೆಯ ಟೈಂ ಟೇಬಲ್‌ನ್ನು ಅನುಸರಿಸುವ ಹಾಗೆ ಪ್ರತಿದಿನ ಮಳೆ ಸುರಿಯುತ್ತಿದೆ.

ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮತ್ತೆ ಆಷಾಢವನ್ನು ಜ್ಞಾಪಿಸುವ ಮಳೆಗಾಲ ಶುರುವಾಗಿದೆ. ಭಾನುವಾರ ಮಂಗಳೂರಿನ ಪೇಟೆಯಲ್ಲಿ ಜನಸಂಚಾರ ಕಡಿಮೆಯಾಗಿತ್ತು. ಭತ್ತದ ಕೃಷಿಯೇ ಹೆಚ್ಚಾಗಿರುವ ಕರಾವಳಿಯಲ್ಲಿ, ಸುಗ್ಗಿ ಬೆಳೆಯ ರೈತರಿಗೆ ಮಳೆ ಖುಷಿ ನೀಡಿದರೆ, ಮಳೆಗಾಲದ ಮೊದಲ ಬೆಳೆ ತೆಗೆಯುವ ರೈತರು ಪೈರು ನೀರಿನಲ್ಲಿ ತೋಯುತ್ತಿರುವುದನ್ನು ನೋಡಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಮಳೆಯ ಜೊತೆಗೆ ಕರಾವಳಿಯ ಸಮುದ್ರವೂ ಕೈಜೋಡಿಸಿದೆ. ಕಾಸರಗೋಡಿನ ಕಾಂಞಗಾಡು ಭಾಗದ ಸಮುದ್ರದಲ್ಲಿ ಭಾನುವಾರ ಅನಿರೀಕ್ಷಿತವಾಗಿ ಭಾರೀ ಪ್ರಮಾಣದ ಅಲೆಗಳೆದ್ದು ಸಮುದ್ರ ಅಪಾಯಕಾರಿ ರೂಪ ತಾಳಿತ್ತು. ಬೆಳಗಿನ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು ಬೆಸ್ತರು ಸಮುದ್ರದಲ್ಲಿ ಬಹಳ ದೂರ ಕ್ರಮಿಸಿರಲಿಲ್ಲವಾದ್ದರಿಂದ ಅಪಘಾತಗಳು ನಡೆದ ವರದಿಯಾಗಿಲ್ಲ. ಸಮುದ್ರದ ಇಂಗಿತವರಿಯದೆ ಕಂಗಾಲಾಗಿರುವ ಕಲವು ಬೆಸ್ತರು ಮೀನುಗಾರಿಕೆಯನ್ನು ಸ್ವ ಇಚ್ಛೆಯಿಂದ ಒಂದರೆಡು ದಿನಗಳ ಕಾಲ ಕೈಬಿಟ್ಟಿದ್ದಾರೆ. ಆದರೆ ಇಲ್ಲಿನ ನೀಲೇಶ್ವರ ಸಮೀಪ ಮೀನುಗಾರಿಕೆಗೆ ತೆರಳಿದ 3 ಬೋಟುಗಳ ಪೈಕಿ ಒಂದು ಬೋಟು

ನಾಪತ್ತೆಯಾಗಿದೆ.

ಅಪರೂಪಕ್ಕೆ ಕೆರೆಗಳು ತುಂಬಿವೆ

ರಾಜ್ಯದಲ್ಲೇ ಅಧಿಕವೆನಿಸಿದ ಮಳೆ ಸುರಿದುದು ಕಾರ್ಕಳದಲ್ಲಿ (11 ಸೆಂ.ಮೀ.). ಕೋಲಾರ, ಹುಬ್ಬಳ್ಳಿ, ಶಿಗ್ಗಾಂವ್‌ಗಳಲ್ಲಿಯೂ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿವೆ. ಮಳೆಗಾಲದ ಅವಧಿ ಮುಗಿಯುತ್ತಿದ್ದಂತೆಯೇ ಶುರುವಾದ ಮಳೆ ಊರಿನ ಕೆರೆಗಳನ್ನು ತುಂಬಿಸಿದ್ದು, ಈ ಅಪರೂಪದ ದೃಶ್ಯ ನೋಡಲು ನೋಡಲು ನೂರಾರು ಸಂಖ್ಯೆಯಲ್ಲಿಯೇ ಜನರು ಬಂದಿರುವ ವರದಿ ತುಮಕೂರಿನಿಂದ ಬಂದಿದೆ.

ಮಂಗಳವಾರ ಮುಂಜಾನೆವರೆಗಿನ ಹವಾಮುನ್ಸೂಚನೆ ಪ್ರಕಾರ ಒಳನಾಡಿನ ಹಲವೆಡೆ ಹಾಗೂ ಕರಾವಳಿಯ ಕೆಲವೆಡೆ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿಯ ಅಲ್ಲಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯೂ ಇದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+