ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೃಂದಾವನದ (ಕೆ.ಆರ್.ಎಸ್) ದೀಪಾಲಂಕಾರ ವೇಳೆ ಬದಲು
ಬೆಂಗಳೂರು : ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ ಜಲಾಶಯದ ಪಕ್ಕದಲ್ಲೇ ಇರುವ ವಿಶ್ವವಿಖ್ಯಾತ ಬೃಂದಾವನ ಉದ್ಯಾನದ ದೀಪಾಲಂಕಾರದ ವೇಳೆಯನ್ನು ಅಕ್ಟೋಬರ್ 1ರ ಸೋಮವಾರದಿಂದ ಬದಲಾಯಿಸಲಾಗಿದೆ.
ಹೊಸ ವೇಳಾಪಟ್ಟಿಯ ರೀತ್ಯ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6-30ರಿಂದ 7-25ರವರೆಗೆ, ಶನಿವಾರ ಮತ್ತು ಭಾನುವಾರಗಳಂದು ಸಂಜೆ 6-30ರಿಂದ 8-25ರವೆರೆಗೆ ದೀಪಾಲಂಕಾರ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಬೃಂದಾವನ ಉದ್ಯಾನ ವೀಕ್ಷಣೆಗೆ ವಾರದ ಎಲ್ಲಾ ದಿನಗಳಲ್ಲಿ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ದಕ್ಷಿಣ ದಂಡೆಯ ಮುಖ್ಯ ಪ್ರವೇಶ ದ್ವಾರದಿಂದ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸರಕಾರಿ ವಾಹನಗಳಿಗೆ ಮಾತ್ರ ದಕ್ಷಿಣ ದ್ವಾರದ ಮೂಲಕ ಪ್ರವೇಶಾವಕಾಶ ಉಂಟು ಎಂದು ಪ್ರಕಟಣೆ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, October 1, 2001, 5:30 [IST]