ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎರಡು ಲಕ್ಷ ಎಕರೆ ಭೂಮಿಗೆ ನೀರುಣಿಸುವ19 ಯೋಜನೆಗಳಿಗೆ ಅಸ್ತು
ಬೆಂಗಳೂರು : 2 ಲಕ್ಷ ಎಕರೆ ಭೂಮಿಗೆ ನೀರುಣಿಸುವ 430 ಕೋಟಿ ರುಪಾಯಿ ಬಂಡವಾಳದ 19 ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬೃಹತ್ ನೀರಾವರಿ ಯೋಜನೆ ನಿಯಂತ್ರಣ ಮಂಡಳಿ ಸೋಮವಾರ ಅನುಮತಿ ನೀಡಿದೆ.
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಸೋಮವಾರ ಜರುಗಿದ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಗುಲ್ಬರ್ಗಾ ಜಿಲ್ಲೆಯಲ್ಲಿ ಭೀಮಾ ನದಿಗೆ, ಬೀದರ್ ಜಿಲ್ಲೆಯಲ್ಲಿ ಮಾಂಜ್ರಾ ನದಿಗೆ ಅಡ್ಡಲಾಗಿ ಕಟ್ಟುವ ಬ್ಯಾರೇಜ್ಗಳು ಸೇರಿದಂತೆ ನಾಲ್ಕು ಬ್ಯಾರೇಜ್ಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಅನುಮತಿ ನೀಡಿದರು ಎಂದು ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಸಭೆ ಕೈಗೊಂಡ ನಿರ್ಣಯಗಳ ವಿವರ-
- 124 ಕೋಟಿ ರುಪಾಯಿ ವೆಚ್ಚದಲ್ಲಿ ದೂದ್ಗಂಗಾ ಯೋಜನೆಯನ್ನು ಪೂರ್ಣಗೊಳಿಸುವುದು. ದೂದ್ಗಂಗಾದಿಂದ 4 ಟಿಎಂಸಿ ನೀರು ಈ ಯೋಜನೆಯಿಂದ ದೊರೆಯಲಿದ್ದು , 40 ಸಾವಿರ ಎಕರೆ ಭೂಮಿಗೆ ನೀರು ಸಿಗಲಿದೆ.
- ಬೆಟ್ಟರಗಿ ಬಳಿ ಭೀಮಾ ನದಿಗೆ 13.42 ಕೋಟಿ ರುಪಾಯಿ ವೆಚ್ಚದಲ್ಲಿ ಬ್ಯಾರೇಜು ನಿರ್ಮಾಣ, 1890 ಎಕರೆ ಭೂಮಿಗೆ ನೀರು.
- 15.04 ಕೋಟಿ ರುಪಾಯಿ ವೆಚ್ಚದಲ್ಲಿ ಕ್ಲೊಲೂರು-ಬಿ ಯೋಜನೆ ಪೂರ್ಣ, 1980 ಎಕರೆ ಭೂಮಿಗೆ ನೀರು.
- 1935 ಎಕರೆ ಪ್ರದೇಶಕ್ಕೆ ನೀರುಣಿಸುವ ಯಾದಗಿರ್ ಯೋಜನೆ 12.56 ಕೋಟಿ ರುಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸುವುದು.
- 1960 ಎಕರೆ ಜಲಾನಯನ ಪ್ರದೇಶ ಕಲ್ಪಿಸುವ ಜೋಲದಡಗಿ ಯೋಜನೆಯನ್ನು 15.58 ಕೋಟಿ ರುಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸುವುದು.
- ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ ಹಾಗೂ ಕರ್ನಾಟರ ನೀರಾವರಿ ನಿಗಮ ಲಿಮಿಟೆಡ್ ಅಡಿಯಲ್ಲಿ ಯೋಜನೆಗಳ ಕಾಮಗಾರಿ ನಡೆಯಲಿದೆ.
Comments
Story first published: Monday, October 1, 2001, 5:30 [IST]