ಜ್ಯೋತಿಷ್ಯ ಕಲಿಕೆಯ ಬಗ್ಗೆ ಕುಲಪತಿಗಳೇಕೆ ಮೌನ ? -ಪರಮೇಶ್ವರ್
ಮೈಸೂರು : ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯವನ್ನು ಕಲಿಸಬೇಕೇ ಬೇಡವೇ ಎಂಬ ಬಗ್ಗೆ ದೇಶಾದ್ಯಂತ ಬಿಸಿಬಿಸಿ
ಚರ್ಚೆ ನಡೆಯುತ್ತಿದ್ದರೂ ವಿಶ್ವವಿದ್ಯಾಲಯಗಳ ಕುಲಪತಿಗಳು ಮಾತ್ರ ಬಿಗುಮೌನ ತಾಳಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್ ತಮ್ಮ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅವರು ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆಯೋಜಿಸಿದ್ದ 2 ದಿನಗಳ ದಕ್ಷಿಣ ಭಾರತ ಕುಲಪತಿಗಳ ಸಮ್ಮೇಳನವನ್ನು ಉದ್ಘಾಟಿಸಿ ಭಾನುವಾರ ಸಂಜೆ ಮಾತನಾಡುತ್ತಿದ್ದರು. ಜ್ಯೋತಿಷ್ಯ ವಿಜ್ಞಾನ ಹೌದೇ ಅಲ್ಲವೇ ಎಂಬ ಬಗ್ಗೆ ಗುಣಾತ್ಮಕವಾದ ಅಥವಾ ಋಣಾತ್ಮಕವಾದ ಅಪ್ರಾಯವನ್ನು ತಿಳಿಸಬೇಕು. ಈ ರೀತಿ ಮೌನವಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಚಿವರು ಸಿಡಿಮಿಡಿಗೊಂಡು ಪ್ರಶ್ನಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಾತನಾಡಿದರೆ ಎಲ್ಲಿ ತಮ್ಮ ವಿವಿಯ ಅನುದಾನ ತಪ್ಪಿ ಹೋಗುತ್ತದೋ ಎಂದು ಕುಲಪತಿಗಳೆಲ್ಲರೂ ಆತಂಕಗೊಂಡಿರುವಂತೆ ಕಂಡು ಬರುತ್ತದೆ. ಅಭಿಪ್ರಾಯ ಸ್ವಾತಂತ್ರ್ಯದ ಬಗ್ಗೆ ಕುಲಪತಿಗಳಿಗೆ ತಿಳಿದಿಲ್ಲವೇನೋ ಎಂದು ಪರಮೇಶ್ವರ್ ಗೇಲಿಯಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವಿಶ್ವವಿದ್ಯಾಲಯ ಸಂಘದ ಅಧ್ಯಕ್ಷ ಡಾ. ಎಚ್. ಪಿ. ದೀಕ್ಷಿತ್ ವಹಿಸಿದ್ದರು.
(ಇನ್ಪೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...