Get Updates
Get notified of breaking news, exclusive insights, and must-see stories!

ಹಳ್ಳಿಗಳತ್ತ ಐಟಿ ಅಭಿಯಾನಕ್ಕೆ ಇನ್ಫೋಸಿಸ್‌ ಇಂಧನ- ಕೃಷ್ಣ ಶ್ಲಾಘನೆ

ಮಂಗಳೂರು: ಮಾಹಿತಿ ತಂತ್ರಜ್ಞಾನವನ್ನು ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಒಯ್ಯುವ ಸರ್ಕಾರದ ಅಭಿಯಾನದಲ್ಲಿ ಎನ್‌.ಆರ್‌. ನಾರಾಯಣಮೂರ್ತಿ ನೇತೃತ್ವದ ಇನ್ಫೋಸಿಸ್‌ ಪ್ರಮುಖ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಶ್ಲಾಘಿಸಿದ್ದಾರೆ.

ಮಂಗಳೂರಿನ ಕೊಟ್ಟಾರದಲ್ಲಿ ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ನಿರ್ಮಿಸಿರುವ ಇನ್ಫೋಸಿಸ್‌-ಮಂಗಳಾ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನಗಳಂಥ ಆಧುನಿಕ ತಂತ್ರಜ್ಞಾನಗಳು ಕೇವಲ ನಗರ ಪ್ರದೇಶದವರಿಗೆ ಮಾತ್ರ ಸೀಮಿತವಾಗಬಾರದು. ಆಧುನಿಕ ತಂತ್ರಜ್ಞಾನಗಳು ಗ್ರಾಮೀಣ ಪ್ರದೇಶಗಳಿಗೆ ನಿಲುಕಿಸಲು ಹಾಗೂ ಐಟಿ ಬೆಂಗಳೂರಿಗೆ ಮಾತ್ರ ಎನ್ನುವ ಜನಮನದ ಅಭಿಪ್ರಾಯವನ್ನು ಬದಲಿಸಲು ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.

ಐಟಿ ಮೂಲಕ ಪ್ರತ್ಯಕ್ಷ ಉದ್ಯೋಗಗಳು ಮಾತ್ರವಲ್ಲದೆ ಪರೋಕ್ಷ ಉದ್ಯೋಗಗಳನ್ನೂ ಇನ್ಫೋಸಿಸ್‌ ಕಲ್ಪಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಷೋಕೇಸ್‌ನಂತೆ ಇನ್ಫೋಸಿಸ್‌ ಬೆಳೆದಿದೆ ಎಂದು ಕೃಷ್ಣ ಬಣ್ಣಿಸಿದರು. ಇನ್ಫೋಸಿಸ್‌- ಮಂಗಳಾ ರಫ್ತು ಆದಾಯ ಮೂಲವಾಗಿ ಬೆಳೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಇನ್ಫೋಸಿಸ್‌ನಿಂದ ಉತ್ತಮ ಉದ್ಯೋಗಾವಕಾಶಗಳು

ಭವಿಷ್ಯದ ಜನಾಂಗಕ್ಕೆ ಅತ್ಯುತ್ತಮ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಮಂಗಳಾ ಕಲ್ಪಿಸುತ್ತದೆ. ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಎಲ್ಲ ಕಂಪನಿಗಳನ್ನೂ ಮಂಗಳೂರಿನ ಜನತೆ ಪ್ರೋತ್ಸಾಹಿಸಬೇಕು ಎಂದು ಎನ್‌.ಆರ್‌. ನಾರಾಯಣಮೂರ್ತಿ ಕರೆ ನೀಡಿದರು. ಕೇಂದ್ರ ಸಚಿವ ಧನಂಜಯಕುಮಾರ್‌, ಇನ್ಫೋಸಿಸ್‌ನ ಆಡಳಿತ ನಿರ್ದೇಶಕ ನಂದನ್‌ ಎಂ.ನೀಲೇಕಣಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+