ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿ ಜಿಲ್ಲೆಯಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 11

By Staff
|
Google Oneindia Kannada News

ಹಾವೇರಿ : ಹಾನಗಲ್‌ ತಾಲ್ಲೂಕಿನ ಯಲ್ಲವಟ್ಟಿ ಗ್ರಾಮದ ಮಹಿಪತೆಪ್ಪ ಕರೇಗಾರ್‌(20) ಎಂಬ ರೈತ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 11ಕ್ಕೆ ಏರಿದೆ.

ಸಾಲ ಮಾಡಿ ತನ್ನ ನಾಲ್ಕು ಎಕರೆ ಜಾಗೆಯಲ್ಲಿ ಭತ್ತ ಬೆಳೆದಿದ್ದ ಕರೇಗಾರ್‌, ಬೆಳೆ ನೆಲಕಚ್ಚಿದ್ದರಿಂದ ಸಾಲ ತೀರಿಸಲಾಗಲಿಲ್ಲ. ಹತಾಶನಾಗಿ ಕೀಟನಾಶಕ ಸೇವಿಸಿ ಈತ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ, ಬಾಗೇವಾಡಿಯಲ್ಲೂ.... : ಬಳ್ಳಾರಿ ಜಿಲ್ಲೆಯ ಅಂದ್ರಾಳಿ ಗ್ರಾಮದ ಬಸವರಾಜು (40) ಹಾಗೂ ಬಸವ ಕಲ್ಯಾಣದ ಭೋಸ್ಗಾ ಗ್ರಾಮದ ಬಂಡಯ್ಯಾ ಸ್ವಾಮಿ (27) ನೆಲ ಕಚ್ಚಿದ ಬೆಳೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಮಳೆ ಬಂದರೂ ಅದರಿಂದ ರೈತ ಸಾಲ ತೀರಿಸಲಾಗುತ್ತಿಲ್ಲ ಅನ್ನೋದನ್ನ ಹೆಚ್ಚುತ್ತಿರುವ ರೈತರ ಆತ್ಮಹತ್ಯ ಪ್ರಕರಣಗಳು ಸಾಬೀತು ಮಾಡುತ್ತಿವೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X