ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಣಸೂರು: ರಾಜ್ಯೋತ್ಸವ ಆಚರಣೆಗಾಗಿ 150 ಕೆಜಿ ತೂಕದ ಭುವನೇಶ್ವರಿ
ಮೈಸೂರು : ಬರುವ ನವಂಬರ್ 1 ರ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಿರುವ ಜಿಲ್ಲೆಯ ಹುಣಸೂರು ಪಟ್ಟಣದ ಜನತೆ, ರಾಜ್ಯದಲ್ಲೇ ಪ್ರಥಮ ಎನ್ನಲಾದ 150 ಕೆಜಿ ತೂಕದ ಭುವನೇಶ್ವರಿ ವಿಗ್ರಹವನ್ನು ಮೆರವಣಿಗಾಗಿ ಸಿದ್ಧಪಡಿಸುತ್ತಿದ್ದಾರೆ.
ನಾಲ್ಕೂವರೆ ಅಡಿ ಎತ್ತರ ಹಾಗೂ ಒಂದೂವರೆ ಕ್ವಿಂಟಾಲ್ನ ಈ ವಿಗ್ರಹ ಇಲವಾಲ ಸಮೀಪದ ಪ್ರತಿಮಾ ಸ್ಟುಡಿಯೋದಲ್ಲಿ ಸಿದ್ಧವಾಗುತ್ತಿದೆ ಎಂದು ಶಾಸಕ ವಿ.ಪಾಪಣ್ಣ ತಿಳಿಸಿದ್ದಾರೆ. ಕಲಾವಿದೆ ಪ್ರಮೋದಿನಿ ವಿ.ದೇಶಪಾಂಡೆ ವಿಗ್ರಹವನ್ನು ರೂಪಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Friday, September 28, 2001, 5:30 [IST]