ಮೋಂಬತ್ತಿ ಬೆಳಕಲ್ಲಿ ಹಿಂದೂ- ಸಿಖ್ಖರ ಶ್ರದ್ಧಾಂಜಲಿ
ನ್ಯೂಯಾರ್ಕ್ : ಇಲ್ಲಿನ ಹಿಂದೂ ಹಾಗೂ ಸಿಖ್ ಸಮುದಾಯದ ಸದಸ್ಯರು, ಪೆಂಟಗನ್ ಹಾಗೂ ವಿಶ್ವ ವ್ಯಾಪಾರ ಕೇಂದ್ರಗಳ ಅವಳಿ ಕಟ್ಟಡಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದವರಿಗೆ ಗುರುವಾರ ಮೇಣದಬತ್ತಿ ಬೆಳಕಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಭಾರತೀಯರ ಪ್ರಾಬಲ್ಯವೇ ಹೆಚ್ಚಾಗಿರುವ ನ್ಯೂಜೆರ್ಸಿಯ ಎಡಿಸನ್ನಲ್ಲಿ ನಡೆದ 90 ನಿಮಿಷಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಖ್ ಹಾಗೂ ಹಿಂದೂ ಸಮುದಾಯದ ಸದಸ್ಯರು ಕೈಗಳಲ್ಲಿ ಮೇಣದ ಬತ್ತಿ ಹಿಡಿದು, ಸುಮಾರು ಒಂದು ಕಿಮೀ ಉದ್ದಕ್ಕೆ ನಿಂತಿದ್ದರು. ವಾಹನಗಳಲ್ಲಿ ಪಯಣಿಸುತ್ತಿದ್ದವರು ತುಸು ನಿಂತು ಇವರ ಪ್ರಯತ್ನಕ್ಕೆ ಬೆಂಬಲ ಕೋರಿದರು.
ಲಾರ್ಜ್ನಲ್ಲಿನ ನೂತನ ಭಾರತ ರಾಯಭಾರಿ ಡಾ.ಭೀಷ್ಮ ಅಗ್ನಿಹೋತ್ರಿ ಹಾಗೂ ಸಂಸದ ರತಿಲಾಲ್ ವರ್ಮ ಅವರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮೆರಿಕಾದಲ್ಲಿ ನ ಸಿಖ್ ಸಂಘ, ಹಿಂದೂ ಸ್ವಯಂ ಸೇವಕ ಸಂಘ, ಸ್ವಾಮಿ ನಾರಾಯಣ ಸಂಸ್ಥೆ ಹಾಗೂ ಅಮೆರಿಕಾದ ವಿಶ್ವ ಹಿಂದೂ ಪರಿಷತ್ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದವು.
ಭಯೋತ್ಪಾದಕತೆ ವಿರುದ್ಧ ಹಿಂದೂ-ಸಿಖ್ ಕೈ ಜೋಡಣೆ, ಹುತಾತ್ಮರಿಗೆ ಹಿಂದೂ-ಸಿಖ್ ಶ್ರದ್ಧಾಂಜಲಿ ಎನ್ನುವ ಬರಹಗಳ ಬ್ಯಾನರ್ಗಳು ಕಾರ್ಯಕ್ರಮದಲ್ಲಿ ವ್ಯಾಪಕವಾಗಿದ್ದವು.
(ಪಿಟಿಐ)