ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ ವೇದ ವಿದ್ವಾಂಸರಿಂದ ಅಮೆರಿಕಾದ ವಿವಿಧ ಭಾಗಗಳಲ್ಲಿ ಜಪ ತಪ
ಬೆಂಗಳೂರು: ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳು ಹಾಗೂ ಪೆಂಟಗನ್ ಮೇಲಿನ ಉಗ್ರರ ದಾಳಿಯ ದುಸ್ವಪ್ನದಿಂದ ತತ್ತರಿಸಿರುವ ಅಮೆರಿಕಾದ ಜನವತೆಗೆ ಶಾಂತಿ ಕೋರಲು ರಾಜ್ಯದಿಂದ ವೇದ ಪಂಡಿತರ ನಿಯೋಗ ಅಮೆರಿಕೆಗೆ ತೆರಳಿದೆ.
ಶೃಂಗೇರಿ ಮಠದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ನೇತೃತ್ವದಲ್ಲಿ ತೆರಳಿರುವ ಈ ತಂಡದಲ್ಲಿ 15 ಮಂದಿ ವೇದ ವಿದ್ವಾಂಸರಿದ್ದು , ಈ ತಂಡ ಅಮೆರಿಕಾದ ಜನತೆಗೆ ಶಾಂತಿ ಕೋರಲು ಹೋಮ ಜಪಾದಿಗಳನ್ನು ನಡೆಸಲಿದೆ. ಸೆ.27 ರಿಂದ ಅಕ್ಟೋಬರ್ 7 ರವರೆಗೆ ಅಮೆರಿಕಾದ ವಿವಿಧ ಭಾಗಗಳಲ್ಲಿ ಈ ತಂಡ ಜಪ ತಪಗಳನ್ನು ನಡೆಸಲಿದೆ.
ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮುಂಬೈ ಮೂಲಕ ಅಮೆರಿಕಾಗೆ ತೆರಳಿದ ತಂಡವನ್ನು ಶೃಂಗೇರಿ ಮಠದ ಭಕ್ತರಾದ ಹಲಗೂರು ನಾಗರಾಜ, ಶಂಕರ ಗುಹಾ, ಬೆಂಗಳೂರು ಮಠದ ಪ್ರಬಂಧಕ ಶ್ರೀನಿವಾಸ ಮುಂತಾದವರು ಶುಭ ಹಾರೈಸಿ ಬೀಳ್ಕೊಟ್ಟರು.
(ಇನ್ಫೋ ವಾರ್ತೆ)
Comments
Story first published: Thursday, September 27, 2001, 5:30 [IST]