ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಐವರು ವಿಜ್ಞಾನಿಗಳಿಗೆ ಶಾಂತಿ ಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ

By Staff
|
Google Oneindia Kannada News

ನವದೆಹಲಿ : ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ ಶಾಂತಿ ಸ್ವರೂಪ ಭಟ್ನಾಗರ್‌ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಜ್ಞಾನಿಗಳಲ್ಲಿ ಐವರು ಬೆಂಗಳೂರಿನವರು ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಆರ್‌ಐ) ಮಹಾ ನಿರ್ದೇಶಕ ಡಾ.ಆರ್‌.ಎ.ಮಾಶೇಲ್ಕರ್‌ ತಿಳಿಸಿದ್ದಾರೆ.

2001ನೇ ಇಸವಿಯ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದ ಮಾಶೇಲ್ಕರ್‌, ಎಂಜಿನಿಯರಿಂಗ್‌ ವಿಜ್ಞಾನ ವಿಭಾಗದಲ್ಲಿ ಯಾರೂ ಪ್ರಶಸ್ತಿಗೆ ಆಯ್ಕೆಯಾಗಿಲ್ಲ ಎಂದರು.

ಪ್ರಶಸ್ತಿ ಪಡೆದ ಬೆಂಗಳೂರಿನ ವಿಜ್ಞಾನಿಗಳ ವಿವರ ಇಂತಿದೆ...
ಡಾ. ಉಮೇಶ್‌ ವಾಶ್ನೇಯ್‌-
ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರು(ಜೈವಿಕ ವಿಜ್ಞಾನ)
ಡಾ.ಪ್ರಶಾಂತ ಗೋಸ್ವಾಮಿ- ಸಿಎಸ್‌ಐಆರ್‌ ಸೆಂಟರ್‌ ಫಾರ್‌ ಮೆತೆಮ್ಯಾಟಿಕಲ್‌ ಮಾಡೆಲಿಂಗ್‌ ಅಂಡ್‌ ಕಂಪ್ಯೂಟರ್‌ ಸಿಮ್ಯುಲೇಷನ್‌, ಬೆಂಗಳೂರು (ಭೂಮಿ, ವಾತಾವರಣ, ಸಾಗರ ಮತ್ತು ಖಗೋಳ ವಿಜ್ಞಾನ)
ಡಾ.ರಾಹುಲ್‌ ಪಂಡಿತ್‌- ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರು(ಭೌತ ವಿಜ್ಞಾನ)
ಡಾ.ಗದಾಧರ ಮಿಶ್ರ- ಇಂಡಿಯನ್‌ ಸ್ಪಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು (ಸಂಖ್ಯಾ ವಿಜ್ಞಾನ)
ಡಾ.ಉದಯ್‌ ಮೈತ್ರ- ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರು(ರಾಸಾಯನಿಕ ವಿಜ್ಞಾನ).

ಪುರಸ್ಕಾರವು ಪ್ರಶಸ್ತಿ ಫಲಕ, ಬಿನ್ನವತ್ತಳಿಕೆ ಹಾಗೂ ತಲಾ 2 ಲಕ್ಷ ರುಪಾಯಿ ನಗದನ್ನು ಒಳಗೊಂಡಿದೆ ಎಂದು ಮಾಶೇಲ್ಕರ್‌ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X