ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆರಾಯ ಒಲಿದರೂ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ತಪ್ಪಿಲ್ಲ
ಬಸವಕಲ್ಯಾಣ : ಮಳೆರಾಯ ಒಲಿದರೂ ಕೆಲವು ರೈತರ ಪಾಲಿಗೆ ತೀರಾ ತಡವಾಗಿದೆ. ಪರಿಣಾಮ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಇನ್ನೂ ನಿಂತಿಲ್ಲ. ತಾಲ್ಲೂಕಿನ ಹಂದ್ರಾಳ(ಕೆ) ಗ್ರಾಮದ ವೀರಾರೆಡ್ಡಿ ಜ್ಞಾನರೆಡ್ಡಿ (35) ಮೈತುಂಬಾ ಮಾಡಿಕೊಂಡ ಸಾಲ ತೀರಿಸಲಾರದೆ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲ ಮಾಡಿ ತನ್ನ ಜಮೀನಿನಲ್ಲಿ ಬೆಳೆದ ಬೆಳೆ ಮಳೆ ಕೈಕೊಟ್ಟು ನಾಶವಾಯಿತು. ಸಾಲಗಾರರ ಬಾಧೆ ಹೆಚ್ಚಾದ ಕಾರಣ ಹತಾಶನಾದ ಈ ರೈತ ತನ್ನ ಹೊಲದ ಮರಕ್ಕೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Comments
Story first published: Tuesday, September 25, 2001, 5:30 [IST]