ಆಫ್ಘನ್ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಸೌದಿ
ದುಬೈ : ಅಮೆರಿಕ ವಿರುದ್ಧ ಪ್ರತಿದಾಳಿಗೆ ಸಜ್ಜಾಗುತ್ತಿರುವ ತಾಲಿಬಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಸೌದಿ ಅರೇಬಿಯಾ ಕೂಡ ಕಡಿದುಕೊಂಡಿದೆ. ಈಗ ಆಫ್ಘಾನಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಏಕೈಕ ರಾಷ್ಟ್ರ ಪಾಕಿಸ್ತಾನವಾಗಿದೆ.
ಆಫ್ಘಾನಿಸ್ತಾನದೊಂದಿಗೆ ಯು.ಎ.ಇ. ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡ ಮೂರು ದಿನಗಳ ಬಳಿಕ ಸೌದಿ ಕೂಡ ಅದೇ ನಿರ್ಧಾರ ತಳೆದಿದೆ. ಭಯೋತ್ಪಾದನೆಗೆ ಇಂಬು ನೀಡುತ್ತಿರುವ ಆಫ್ಘನ್ನೊಂದಿಗೆ ತಾನು ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಸೌದಿ ಸರಕಾರದ ಪ್ರಕಟಿಸಿದೆ ಎಂದು ರಿಯಾದ್ನ ಎಸ್ಪಿಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
- ಈ ಮಧ್ಯೆ ತನ್ನ ಮೇಲೆ ಆಕ್ರಮಣ ಮಾಡುವವರ ವಿರುದ್ಧ ಪ್ರತಿ ಆಕ್ರಮಣ ಮಾಡುವುದಾಗಿ ತಾಲಿಬಾನ್ ಕಟ್ಟೆಚ್ಚರಿಕೆ ನೀಡಿದೆ.
- ತನ್ನ ವಿರುದ್ಧ ದಾಳಿ ಮಾಡಲು ಸಹಾಯ ಮಾಡುವ ರಾಷ್ಟ್ರಗಳ ಮೇಲೂ ತಾನು ಪ್ರತಿದಾಳಿ ಮಾಡೇ ತೀರುತ್ತೇನೆ ಎಂದು ಕಟ್ಟಾ ಉಗ್ರವಾದಿ ತಾಲಿಬಾನ್ ಹೇಳಿದೆ.
- ಸಂಭವನೀಯ ಯುದ್ಧದಲ್ಲಿ ಜೈವಿಕ ಹಾಗೂ ರಾಸಾಯನಿಕ ದಾಳಿ ನಡೆಯುವ ಸಾಧ್ಯತೆ ಇದ್ದು, ಎಲ್ಲ ರಾಷ್ಟ್ರಗಳೂ ಜಾಗರೂಕರಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಗ್ರೋ ಹಾರ್ಲೆಮ್ ಬ್ರೂಂಡ್ ಲ್ಯಾಂಡ್ ಎಚ್ಚರಿಕೆ ನೀಡಿದ್ದಾರೆ.
- ಅಮೆರಿಕದ ಸೇನಾ ಪಡೆ ಎಲ್ಲ ಕಡೆಯಿಂದಲೂ ಆಫ್ಘಾನಿಸ್ತಾನವನ್ನು ಸುತ್ತುವರಿಯುತ್ತಿದ್ದು, ಯುದ್ಧದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
- ಜೇಹಾದ್ (ಧರ್ಮಯುದ್ಧ)ದಲ್ಲಿ 3 ಲಕ್ಷ ತಾಲಿಬಾನ್ ಸೈನಿಕರು ಪಾಲ್ಗೊಳ್ಳುವರೆಂದು ತಾಲಿಬಾನ್ ಮಿಲಿಟರಿ ಆಡಳಿತ ಹೇಳಿದೆ.
- ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ದದ ಹೋರಾಟಕ್ಕೆ ಅಮೆರಿಕಕ್ಕೆ ಬೆಂಬಲ ನೀಡುವುದಾಗಿ ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ.
- ಮಧ್ಯ ಏಷ್ಯಾದಲ್ಲಿರುವ ಸೋವಿಯತ್ ಯುದ್ಧ ವಿಮಾನ ಪೂರೈಕೆ ಸೇರಿದಂತೆ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಬೆಂಬಲ ಸೂಚಿಸಿರುವ ರಷ್ಯದ ನಿರ್ಧಾರವನ್ನು ಅಮೆರಿಕ ಕಾರ್ಯದರ್ಶಿ ಕೋಲಿನ್ ಪೋವೆಲ್ ಸ್ವಾಗತಿಸಿದ್ದಾರೆ.
- ಸೆ.11ರಂದು ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ ಈವರೆಗೆ 353 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.
- ಭಯೋತ್ಪಾದನೆ ವಿರುದ್ಧವನ್ನು ತಾವು ಸರಳವಾಗಿ ಗೆಲ್ಲಬೇಕಿದ್ದು, ಲಾಡೆನ್ ವಿರುದ್ಧ ಸಾಕ್ಷ್ಯಾಧಾರ ಬಹಿರಂಗಮಾಡಿ ಯುದ್ಧವನ್ನು ಮತ್ತಷ್ಟು ಕ್ಲಿಷ್ಟಕರ ಮಾಡಿಕೊಳ್ಳುವುದಿಲ್ಲ ಎಂದು ಬುಷ್ ಹೇಳಿದ್ದಾರೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications