ಮುರ್ಡೇಶ್ವರದಲ್ಲಿ 123 ಅಡಿಯ ವಿಶ್ವದ ಅತಿ ಎತ್ತರದ ಶಿವ ಪ್ರತಿಮೆ
ಮುರ್ಡೇಶ್ವರ : ಸಮುದ್ರತಟದ ಸುಂದರ ಹಾಗೂ ಯಾತ್ರಾರ್ಥಿಗಳಿಗೆ ಪವಿತ್ರವಾದ ಪ್ರವಾಸಿ ತಾಣ ಮುರ್ಡೇಶ್ವರ ತನ್ನ ಹೆಗ್ಗಳಿಕೆಯ ಬತ್ತಳಿಕೆಗೆ ಮತ್ತೊಂದು ಗರಿ ಅಲಂಕರಿಸಿಕೊಂಡಿದೆ. ವಿಶ್ವದ ಅತ್ಯಂತ ದೊಡ್ಡ ಶಿವ ಪ್ರತಿಮೆ, ಮುರ್ಡೇಶ್ವರದಲ್ಲಿ ಎದ್ದು ನಿಲ್ಲುವ ಗಳಿಗೆ ಹತ್ತಿರದಲ್ಲಿದೆ, ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ.
123 ಅಡಿ ಎತ್ತರದ ನೀಲಕಂಠ ಪ್ರತಿಮೆಯನ್ನು ಕಡೆಯಲು ಶಿಲ್ಪಿಗಳಿಗೆ 2 ವರ್ಷವೇ ಹಿಡಿಯಿತು. ಇಂಥ ಶಿಲ್ಪಗಳನ್ನು ಕಟೆದಿರಿಸುವುದರಲ್ಲಿ ಎತ್ತಿದ ಕೈ ಎನಿಸಿದ ಶಿವಮೊಗ್ಗೆಯ ಶಿಲ್ಪಿ ಶ್ರೇಷ್ಠ ಕಾಶೀನಾಥ್ ಹಾಗೂ ಅವರ ಪುತ್ರ ಶ್ರೀಧರ್, ನೀಲಕಂಠ ಪ್ರತಿಮೆ ರೂಪುಗೊಳ್ಳುವಲ್ಲಿ ದುಡಿದಿದ್ದಾರೆ. ಸೂರ್ಯನ ಕಿರಣಗಳಿಗೆ ಮೈಯ್ಯಾಡ್ಡಿ, ಪ್ರತಿಮೆಯ ಕಣ್ಣುಗಳು ಹೊಳೆಯುವಂತೆ ಮಾಡಿರುವುದು ಶಿಲ್ಪಿಗಳ ಕರ ಕುಶಲತೆಗೆ ಸಾಕ್ಷಿ .
ಭಟ್ಕಳಕ್ಕೆ 12 ಕಿಮೀ ದೂರದಲ್ಲಿರುವ ಮುರ್ಡೇಶ್ವರ ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾದುದು. ಮುರ್ಡೇಶ್ವರದ ವಾಸ್ತು ವೈಭವಕ್ಕೆ ಹೊಸ ಸೇರ್ಪಡೆ ನೀಲಂಕಂಠ ಪ್ರತಿಮೆ. ಇದರ ನಿರ್ಮಾಣಕ್ಕೆ 1 ಕೋಟಿ ರುಪಾಯಿ ಖರ್ಚಾಗಿದೆ. ತವರಿಗೆ ಏನನ್ನಾದರೂ ಸಲ್ಲಿಸಬೇಕು ಎನ್ನುವ ಕೈಗಾರಿಕೋದ್ಯಮಿ ಆರ್.ಎನ್.ಶೆಟ್ಟಿ ಅವರ ಸಂಕಲ್ಪದ ಫಲ ಈ ಪ್ರತಿಮೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications