ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಯಲಲಿತಾ ಸೀಟು ಹೋದದ್ದಕ್ಕೆ 13 ಅಭಿಮಾನಿಗಳ ಆತ್ಮಹತ್ಯೆ
ಚೆನ್ನೈ : ತಮಿಳುನಾಡಿನ ಜನರ ಹುಚ್ಚು ಅಭಿಮಾನ ಎಲ್ಲೆ ಮೀರಿದೆ. ಮುಖ್ಯಮಂತ್ರಿಯಾಗಿ ಜಯಲಲಿತಾ ನೇಮಕಾತಿಯನ್ನು ಸುಪ್ರಿಂಕೋರ್ಟ್ ರದ್ದು ಪಡಿಸಿದ್ದರಿಂದ ಬೇಸತ್ತಿರುವ ಆಕೆಯ ಅಭಿಮಾನಿಗಳು ಹಾಗೂ ಎಐಎಡಿಎಂಕೆ ಕಾರ್ಯಕರ್ತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈವರೆಗೆ 13 ಜನ ಆತ್ಮಹತ್ಯೆ ಮಾಡಿಕೊಂಡಿದ್ದು, ನಾಲ್ವರು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ಸೇರಿದ್ದಾರೆ.
ವಿರೋಧಿಗಳ ನಗು ಹೆಚ್ಚು ದಿನ ಉಳಿಯುವಂಥದ್ದಲ್ಲ. ನಾನು ಮತ್ತೆ ಗದ್ದುಗೆ ಏರುವ ದಿನ ದೂರವಿಲ್ಲ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ ಜಯಾ ಅವರ ಲೆಕ್ಕಾಚಾರ ತಪ್ಪುತ್ತಿಲ್ಲ. ಅವರು ಆತ್ಮಹತ್ಯೆಗಳು ನಡೆಯುತ್ತಿದ್ದರೂ ಸಣ್ಣಗೆ ನಗುತ್ತಲೇ ಇದ್ದಾರೆ. ಅಂದಹಾಗೆ, ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ತಮ್ಮ ಪಕ್ಷದ ವತಿಯಿಂದ ತಲಾ 50 ಸಾವಿರ ರುಪಾಯಿ ಪರಿಹಾರವನ್ನೂ ಜಯಾ ಘೋಷಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Tuesday, September 25, 2001, 5:30 [IST]