‘ಅಮೆರಿಕಾ ನೊಗಕ್ಕೆ ಹೆಗಲು ತೋರಿ, ಬೀದಿ ಮಾರಿಯ ಕರೆದ ಭಾರತ’
ಬೆಂಗಳೂರು : ಆತುರಗಾರನಿಗೆ ಬುದ್ಧಿ ಮಟ್ಟ ಅನ್ನೋದು ಪ್ರಸ್ತುತ ಭಾರತಕ್ಕೆ ಅನ್ವಯಿಸುತ್ತದೆ. ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲಿನ ನಡೆದ ದಾಳಿಗೆ ಪ್ರತಿದಾಳಿಗಾಗಿ ಅಮೆರಿಕಾ ಸಜ್ಜಾದೊಡನೆಯೇ, ಭಾರತ ಅದಕ್ಕೆ ಬೆಂಬಲಿಸುವುದಾಗಿ ಹೇಳಿ ತೊಂದರೆಗಳನ್ನು ಮೈಮೇಲೆ ಎಳೆದುಕೊಂಡಿದೆ ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಎ.ಪಿ.ವೆಂಕಟೇಶ್ವರನ್ ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕಾ ಕೇಳುವ ಮುಂಚೆಯೇ ಭಾರತ ಅಭಯ ಹಸ್ತ ಚಾಚುವ ಅವಶ್ಯಕತೆಯಾದರೂ ಏನಿತ್ತು? ತನ್ನ ಹಿತಾಸಕ್ತಿ ಬಗ್ಗೆ ಹಿಂದೂಮುಂದೂ ಯೋಚಿಸದೆ ಕೈಗೊಂಡ ಆತುರದ ನಿರ್ಧಾರ ಇದು ಎಂದು ವೆಂಕಟೇಶ್ವರನ್ ಭಾರತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಿಂದೆ ಚೀನಾದಲ್ಲಿ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿರುವ ವೆಂಕಟೇಶ್ವರನ್ ಸಿಟಿಜನ್ ಫೋರಮ್ ಶನಿವಾರ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ‘ಅಮೆರಿಕಾದಲ್ಲಿನ ಇತ್ತೀಚಿನ ಬೆಳವಣಿಗೆಗಳು- ಭಾರತದ ಮುಂದಿನ ಹೆಜ್ಜೆಗಳು ಇಂತಿರಬೇಕು’ ಎಂಬ ವಿಷಯ ಕುರಿತು ಮಾತಾಡುತ್ತಿದ್ದರು.
ಅಮೆರಿಕಾ ನಮಗೇನು ಮಾಡಿದೆ?
ಭಾರತದಲ್ಲಿ ಉಗ್ರರು ನಿದ್ದೆ ಕದಿಯುತ್ತಿದ್ದಾರೆ ಅನ್ನೋದನ್ನ ಎರಡೂ ಕಿವಿಗಳಲ್ಲಿ ಕೇಳಿ, ಬಿಟ್ಟಿತೇ ವಿನಃ ಅದಕ್ಕೆ ಸ್ಪಂದಿಸಲಿಲ್ಲ. ಪಾಕಿಸ್ತಾನ ತನ್ನ ನೆಲದಲ್ಲಿ ನಡೆಸುತ್ತಿರುವ ಭಯೋತ್ಪಾದನೆಗೆ ಭಾರತ ಲಿಖಿತ ಪುರಾವೆ ಒದಗಿಸಿದರೂ, ಅಮೆರಿಕಾ ಮುಗುಮ್ಮಾಗೇ ಇತ್ತು. ಭಾರತದಲ್ಲಿ 12 ಕೋಟಿ ಮುಸಲ್ಮಾನರಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಾಗಲೀ ‘ಜೆಹಾದ್’ಗೆ ಕರೆ ನೀಡಿದರೆ, ಈ ಮುಸಲ್ಮಾನರ ಪೈಕಿ ಹಲವರಾದರೂ ಸ್ಫೋಟಿಸುವ ಆತಂಕವಿದೆ ಎಂದರು.
ಬಾಲಂಗೋಚಿ : ಬಹುಶಃ ವೆಂಕಟೇಶ್ವರನ್ ಬೆಂಗಳೂರಲ್ಲಿ ಕೂಗಾಡಿದ್ದು ಅಮೆರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಕಿವಿಗೆ ಬಿದ್ದಿದೆ. ಈ ಕಾರಣಕ್ಕೇ ಜಮ್ಮು- ಕಾಶ್ಮೀರ ಭಯೋತ್ಪಾದನೆ ನಿರ್ಮೂಲನೆ ಮಾಡುವುದಾಗಿಯೂ ಅಮೆರಿಕ ಘೋಷಿಸಿರಬಹುದೆ ?
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications