ಅಂತೂ ಇಂತೂ ಬಿತ್ತು ಬೆಂಗಳೂರಿನಲ್ಲಿ ಧಾರಾಕಾರ ಮಳೆ
ಬೆಂಗಳೂರು : ಮಳೆಯ ಕಾಣದಿದ್ದ ಬೆಂಗಳೂರಿನಲ್ಲಿ ಕಳೆದ ಕೆಲವು ದಿನದಿಂದ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿಯಂತೂ ಬೆಂಗಳೂರಿನಲ್ಲಿ ಭಾರೀ ಮಳೆ. ಧಾರಾಕಾರ ಮಳೆ. ದಪ್ಪ ಹನಿಯ ಜೋರು ಮಳೆ. ಗುಡುಗು - ಸಿಡಿಲಿನ ಅಬ್ಬರದ ಮಳೆ. ಸಂಜೆ 8 ಗಂಟೆಗೆ ಆರಂಭವಾದ ಮಳೆ ಮಧ್ಯರಾತ್ರಿಯರೆಗೂ ಸುರಿದೇ ಇತ್ತು.
ಮಳೆಯಾದೊಡನೆ ಮಾಮೂಲಿನಂತೆ ಬೆಂಗಳೂರಿನ ರಸ್ತೆಗಳೆಲ್ಲಾ ಕೆರೆಗಳಾದವು. ನೀರು ಮನೆಗೆ ನುಗ್ಗಿತ್ತು. ತಗ್ಗು ಪ್ರದೇಶದ ಜನ ರಾತ್ರಿಯೆಲ್ಲಾ ನಿದ್ದೆ ಗೆಟ್ಟು, ಈಜುಕೊಳವಾಗಿದ್ದ ಮನೆಯಿಂದ ನೀರನ್ನು ಹೊರಕ್ಕೆ ಹಾಕುವ ಕಾಯಕದಲ್ಲಿ ನಿರತರಾಗಿದ್ದರು. ಇದು ಒಳಚರಂಡಿಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಜೆ.ಪಿ. ನಗರ, ಮುನೇಶ್ವರ ಬಡಾವಣೆ, ಶಾಕಾಂಬರಿ ನಗರ, ಪದ್ಮನಾಭನಗರ, ಚಾಮರಾಜಪೇಟೆ, ಬಸವನಗುಡಿ, ಕೋರಮಂಗಲ, ಅಲಸೂರು, ಇಂದಿರಾನಗರ, ದೊಮ್ಮಲೂರು, ರಾಜಾಜಿನಗರ, ಮಲ್ಲೇಶ್ವರದ, ವೈಯಾಲಿಕಾವಲ್ನ ತಗ್ಗು ಪ್ರದೇಶದ ಹಲವು ಮನೆಗಳು ಜಲಾವೃತವಾದವು.
ಜೆ.ಪಿ. ನಗರದ 2ನೇ ಹಂತದ 21ನೇ ಮುಖ್ಯರಸ್ತೆಯಲ್ಲಿ ಮಳೆ -ಗಾಳಿಗೆ ಮರಗಳು ನೆಲಕಚ್ಚಿದವು. ಸಂಚಾರ ಅಸ್ತವ್ಯಸ್ತವಾಯಿತು. ರಸ್ತೆಯ ಮೇಲೆ ನಾಲ್ಕಾರು ಅಡಿ ನೀರು ಹರಿಯುತ್ತಿದ್ದರಿಂದ ಬೆಂಗಳೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.
ಸಾಲದ್ದಕ್ಕೆ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಕೈಕೊಟ್ಟು, ಕತ್ತಲಲ್ಲಿ ಜನ ಮನೆಗೆ ನುಗ್ಗಿದ ನೀರು ಎತ್ತಲು ಪಟ್ಟ ಬವಣೆ ಅಷ್ಟಿಷ್ಟಲ್ಲ. ಕೆಲವು ಬಡಾವಣೆಗಳಲ್ಲಿ ಅಗ್ನಿಶಾಮಕ ಪಡೆಗಳು ಮನೆಗೆ ನುಗ್ಗಿದ ನೀರು ಹೊರತೆಗೆಯಲು ನೆರವಾದವು. ಬೆಂಗಳೂರಿನ ಹಲವು ಬಡಾವಣೆಯ ನಾಗರಿಕರು ಬೆಂಗಳೂರು ನಗರ ಪಾಲಿಕೆಗೆ ಫೋನ್ ಮಾಡಿದರಾದರೂ ಏನೂ ಪ್ರಯೋಜನ ಆಗಲಿಲ್ಲ.
ನೆನಪಿಡಿ, ಮಳೆ ಹಾವಳಿ ಅತಿಯಾದಾಗ ನೀವು ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ - 2221188. ಅವರು ನೆರವಿಗೆ ಬಾರದಿದ್ದರೆ ನಾವಂತೂ ಜವಾಬ್ದಾರರಲ್ಲ.
ಬಾಲಂಗೋಚಿ : ಅಮೆರಿಕಕ್ಕೆ ಹೋಗಿದ್ದ ಹಿರಿಯ ಪತ್ರಕರ್ತ ಮಿತ್ರರೊಬ್ಬರು. ಶುಕ್ರವಾರ ಬೆಂಗಳೂರಿಗೆ ಮರಳಿದರು. ಅವರು ಮೊನ್ನೆ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲೂ ಧಾರಾಕಾರ ಮಳೆ ಸುರಿಯುತ್ತಿತ್ತು. ಅಲ್ಲಿಂದ ಲಂಡನ್ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಾಗಲೂ ಭಾರೀ ವರ್ಷ ಧಾರೆ.
ಹೀಥ್ರೂನಿಂದ ಮುಂಬಯಿಗೆ ಬಂದಾಗ, ಬಾಂಬೆಯಲ್ಲೂ ಬೊಂಬಾಟ್ ಮಳೆ. ಅಲ್ಲಿಂದ ಬೆಂಗಳೂರಿಗೆ ಬಂದ ಅವರು, ಭಾರಿ ಮಳೆಯಲ್ಲಿ ನೆಂದು ಮನೆಗೆ ಬಂದರು. ಅಲ್ಲೂ ಮಳೆ, ಇಲ್ಲೂ ಮಳೆ, ಎಲ್ಲೆಲ್ಲೂ ಮಳೆ. (ಬರಪೀಡಿತ ಪ್ರದೇಶ ಹೊರತುಪಡಿಸಿ)
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications