ಅಫ್ಘಾನಿಸ್ತಾನ್ ನೆಪವಷ್ಟೆ, ಯುದ್ಧ ಭಯೋತ್ಪಾದನೆಯ ವಿರುದ್ಧ -ಅಟಲ್
ನವದೆಹಲಿ : ಭಯೋತ್ಪಾದನೆ ಅಂತರರಾಷ್ಟ್ರೀಯ ಪಿಡುಗು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಅಮೆರಿಕ ಶಕ್ಯವಾಗಿದೆ. ಪ್ರಸ್ತುತ ಜಗತ್ತಿನಲ್ಲಿರುವ ಭಯೋತ್ಪಾದನಾ ಪಿಡುಗಿನ ಸಂಕೇತವಾದ ಅಫ್ಘಾನಿಸ್ತಾನದ ವಿರುದ್ಧ ಹೋರಾಡುತ್ತದೋ ಅಥವಾ ಭಯೋತ್ಪಾದನೆಯನ್ನೇ ನಿರ್ಮೂಲಗೊಳಿಸಲು ಹೋರಾಡುತ್ತದೋ ಎನ್ನುವುದು ಸ್ವತಂತ್ರ ರಾಷ್ಟ್ರವಾದ ಅಮೆರಿಕದ ನಿರ್ಣಯಕ್ಕೇ ಬಿಟ್ಟದ್ದು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದಾರೆ.
ಭಾರತದ ಬಗ್ಗೆ ಮುಷರ್ರಫ್ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಮಾತನಾಡುತ್ತಿದ್ದ ಅವರು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತದ ಬೆಂಬಲವನ್ನು ಅಮೆರಿಕಾ ಸ್ವಾಗತಿಸಿದ್ದರೂ, ಭಾರತದ ಕಹಿ ಅನುಭವ, ಭಯೋತ್ಪಾದನೆ ನಿರ್ಮೂಲಗೊಳಿಸಲು ಭಾರತದ ಪ್ರಯತ್ನದ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ . ಲ್ಯಾಡೆನ್ನ್ನು ವಶಕ್ಕೆ ತೆಗೆದುಕೊಂಡ ನಂತರವಾದರೂ ಅಮೆರಿಕಾ ಈ ಬಗ್ಗೆ ಪ್ರತಿಕ್ರಿಯಿಸಬಹುದು ಎಂದು ಪ್ರಧಾನಿ ಆಶಿಸಿದರು.
ಅಫ್ಘಾನಿಸ್ತಾನ ರಾಷ್ಟ್ರದ ಹೊರತಾಗಿಯೂ ಅಮೆರಿಕಾ ಯೋಚಿಸಬೇಕಾಗಿದೆ. ಭಯೋತ್ಪಾದನೆಯನ್ನು ಪೋಷಿಸಿರುವ ರಾಷ್ಟ್ರಗಳನ್ನೂ ಅಮೆರಿಕಾ ಪರಿಗಣಿಸಬೇಕಾಗಿದೆ. ಆ ಮೂಲಕ ಭಯೋತ್ಪಾದನೆಯ ಬೇರನ್ನು ಕಿತ್ತೊಗೆಯಲು ಮುಂದಾಗಬೇಕಾಗಿದೆ.
ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತರಲು ಭಾರತ ಬಯಸುತ್ತಿದೆ ಎಂಬ ಮುಷರ್ರಫ್ಅವರ ಹೇಳಿಕೆಯ ಬಗೆ ್ಗ ಮಾತನಾಡಿದ ವಾಜಪೇಯಿ, ಪಾಕಿಸ್ತಾನದ ಹಲವು ಸಂಘಟನೆಗಳನ್ನು ಅಮೆರಿಕಾ ಭಯೋತ್ಪಾದಕ ಸಂಘಗಳೆಂದು ಘೋಷಿಸಿದೆ. ಪಾಕಿಸ್ತಾನವನ್ನು ಭಯೋತ್ಪಾಕ ದೇಶವೆಂದು ಘೋಷಿಸಬೇಕೆಂಬ ಬೇಡಿಕೆ ತುಂಬಾ ಹಳೆಯದು. ಈ ಬಗ್ಗೆ ಅಮೆರಿಕಾ ಯಾವುದೇ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಅಮೆರಿಕಾ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳೇನೂ ನಡೆದಿಲ್ಲವಷ್ಟೆ ಎಂದರು.
(ಇನ್ಫೋ ವಾರ್ತೆ)
Post Your Views
ಮುಖಪುಟ / ಭಯೋತ್ಪಾದನೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications