Get Updates
Get notified of breaking news, exclusive insights, and must-see stories!

ಜಯಲಲಿತಾ ಸ್ಪರ್ಧೆಗೆ ಅನುವಾಗುವಂತೆ ಎಐಡಿಎಂಕೆ ಶಾಸಕನ ರಾಜೀನಾಮೆ

ಚೆನ್ನೈ: ಕುತೂಹಲಕಾರಿ ಬೆಳವಣಿಗೆಯಾಂದರಲ್ಲಿ ಎಐಎಡಿಎಂಕೆ ಶಾಸಕ ತಂಗ ತಮಿಳುಸೆಲ್ವಂ ತಮ್ಮ ಆಂಡಿಪಟ್ಟಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಜಯಲಲಿತಾ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯ ಕುರಿತೂ ಪ್ರಸ್ತುತ ಪ್ರಶ್ನೆಗಳು ಉಳಿದಿದ್ದರೂ, ಅವರು ಶಾಸಕರಾಗಿ ಚುನಾಯಿತರಾಗಲು ಅವಕಾಶ ಕಲ್ಪಿಸಿಕೊಡುವುದು ಈ ರಾಜೀನಾಮೆಯ ಉದ್ದೇಶ ಎನ್ನಲಾಗಿದೆ.

ನವಂಬರ್‌ 13 ಜಯಾ ಶಾಸಕರಾಗಿ ಆಯ್ಕೆಯಾಗಲು ಕೊನೆಯ ದಿನ. ಆದರೆ, ಈವರೆಗೂ ಜಯಲಲಿತಾ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದ್ದು, ಜಯಲಲಿತಾ ಚುನಾವಣೆಗಳಲ್ಲಿ ಸ್ಪರ್ಧಿಸುವ ವಿಷಯ ಕಗ್ಗಂಟಾಗಿಯೇ ಉಳಿದಿದೆ.

ಮೇ 10, 2000 ಚುನಾವಣೆಗಳಲ್ಲಿ ಜಯಲಲಿತಾ ಸ್ಪರ್ಧಿಸ ಬಯಸಿದ್ದ 4 ಕ್ಷೇತ್ರಗಳಲ್ಲಿ ಆಂಡಿಪಟ್ಟಿ ಕೂಡ ಒಂದಾಗಿತ್ತು . ಆದರೆ ಪೀಪಲ್‌ ಆಕ್ಟ್‌ ಪ್ರಕಾರ ಅವರ ನಾಲ್ಕೂ ನಾಮಪತ್ರಗಳನ್ನು ತಿರಸ್ಕರಿಸಲಾಗಿತ್ತು . ಜಯಲಲಿತಾ ಅವರ ಗುರು ಎಂ.ಜಿ.ರಾಮಚಂದ್ರನ್‌ ಅವರು ಕೂಡ ಆಂಡಿಪಟ್ಟಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

ತಮಿಳುಸೆಲ್ವಂ ಅವರು ಸೆಪ್ಟಂಬರ್‌ 15 ರಿಂದಲೇ ಅನ್ವಯಿಸುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್‌ ಸಭಾಧ್ಯಕ್ಷ ಕೆ.ಕಾಲಿಮುತ್ತು ಅವರು ಸೆಲ್ವಂ ರಾಜೀನಾಮೆ ಅಂಗೀಕೃತವಾಗಿದ್ದು, ಆಂಡಿಪಟ್ಟಿ ಕ್ಷೇತ್ರ ತೆರವಾಗಿದೆಯೆಂದು ಬುಧವಾರ ಪ್ರಕಟಿಸಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+