ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಚ್ಚಿನ ಮದ್ಯದಂಗಡಿ ಗಳು ಯಾಕೆ ಬೇಕು? ಸಚಿವರಲ್ಲಿವೆ 3 ಕಾರಣ
ಬೆಂಗಳೂರು : ಹೊಸ ಮದ್ಯದಂಗಡಿಗಳಿಗೆ, ಬಾರ್ಗಳಿಗೆ ಲೈಸನ್ಸ್ ನೀಡುವ ಬಗೆಗಿನ ಎಲ್ಲ ಹಲ್ಲಾ ಗುಲ್ಲಾಗಳ ನಡುವೆ ಅಬಕಾರಿ ಸಚಿವ ಎಂ. ಎಂ. ನಾಣಯ್ಯ ಅವರಿಗೆ ರಾಜ್ಯದಲ್ಲಿರುವ ನಿರುದ್ಯೋಗಿಗಳ ಮಾತು ಕೇಳಿಸಿದೆ.
ನಾಣಯ್ಯ ಅವರು ಸಂದರ್ಶನವೊಂದರಲ್ಲಿ ಹೇಳಿದ ಪ್ರಕಾರ :
- ಮದ್ಯದಂಗಡಿಗಳನ್ನು ತೆರೆಯಲು ತೀವ್ರ ಆಗ್ರಹ ಸರಕಾರದ ಮಂದಿದೆ. ಯಾಕೆಂದರೆ ಇದು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡಬಲ್ಲುದು.
- ಅಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆ, ಪ್ರವಾಸೀ ಕ್ಷೇತ್ರಗಳ ಹೆಚ್ಚಳ, ಟ್ರಾಫಿಕ್ ಹೆಚ್ಚಳ ಇವೆಲ್ಲದಕ್ಕೆ ಅನುಪಾತವಾಗಿ ಮದ್ಯದಂಗಡಿಗಳ ಸಂಖ್ಯೆಯೂ ಹೆಚ್ಚಬೇಕು.
- ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿದೆ. ಅದನ್ನು ನಿವಾರಿಸಲು ಹಣದ ಅಗತ್ಯವಿದೆ. ಮದ್ಯದಂಗಡಿ ಬೊಕ್ಕಸಕ್ಕೆ ಹಣ ಬರುತ್ತದೆ.
- ಲೈಸನ್ಸ್ಗಾಗಿ ಈಗಾಗಲೇ 30ರಿಂದ 40 ಸಾವಿರ ಅರ್ಜಿಗಳು ಅಬಕಾರಿ ಇಲಾಖೆಯ ಮುಂದಿದೆ ಎಂದರೆ ನಿರುದ್ಯೋಗಿಗಳ ಬಗ್ಗೆ ನೀವೇ ಯೋಚಿಸಿ. ಲೈಸನ್ಸ್ ಕೊಡುವ ಪ್ರಕ್ರಿಯೆಲ್ಲಿ ಬರುವ ಹಣವನ್ನು ಬರಪರಿಹಾರಕ್ಕೆ ಬಳಸಬಹುದಲ್ಲ ?
Comments
Story first published: Tuesday, September 18, 2001, 5:30 [IST]