ದಾಖಲೆ ಪತ್ರದಲ್ಲಿ ಪ್ರಾಯವಾಗಿರುವಾಗ ಬಾಲಕಾರ್ಮಿಕತೆ ಎಲ್ಲಿ ಬಂತು?
ಬೆಂಗಳೂರು : ಪುಟ್ಟ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು ಅಂತ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಗೊಳಿಸುವ ದೃಷ್ಟಿಯಿಂದ ಸರಕಾರ ಆಜ್ಞೆ ಮಾಡಿದ್ದರೆ ಮಾಲಿಕರು ಸುಳ್ಳು ಪ್ರಮಾಣ ಪತ್ರದೊಂದಿಗೆ ರಂಗೋಲಿ ಕೆಳಗೆ ತೂರುವ ಜಾಣ್ಮೆ ತೋರಿದ್ದಾರೆ.
ಸಿಂಪಲ್ ! ಈ ಮಕ್ಕಳ ವಯಸ್ಸಿನ ಸುಳ್ಳು ಸರ್ಟಿಫಿಕೇಟನ್ನು ಮಾಡಿಟ್ಟುಕೊಂಡರೆ ಆಯ್ತು. ಕೈಗೆ ಸ್ವಲ್ಪ ಹಣ ಬಂದರೆ ಈ ಸರ್ಟಿ ಫಿಕೇಟ್ ಕೊಡಲು ಹಿಂದೆ ಮುಂದೆ ನೋಡುವ ವೈದ್ಯರು, ಅಧಿಕಾರಿಗಳೂ ಕಾಣಸಿಗುವುದು ಕಡಿಮೆ. ಮಾಲಿಕರ ಈ ಹೊಸ ವರಸೆಯನ್ನು ಸರಕಾರ ಪತ್ತೆ ಮಾಡಿದೆ. ಹಾಗೆ ಸರ್ಟಿಫಿಕೇಟ್ ನೀಡುವ ವೈದ್ಯರೊಬ್ಬರ ಮೇಲೆ ಮೊಕದ್ದಮೆಯನ್ನೂ ದಾಖಲಿಸಿದೆ.
ದೊಡ್ಡ ದೊಡ್ಡ ಯಂತ್ರಗಳು ಸದ್ದು ಮಾಡುವ ಕಾರ್ಖಾನೆಗಳಲ್ಲಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೆಲಸ ಮಾಡಬಾರದು ಎಂಬ ಆದೇಶವನ್ನು ಮಕ್ಕಳಿಗೆ 15 ಅಥವಾ 16 ವರ್ಷವಾಗಿದೆ ಎಂಬ ಪ್ರಮಾಣ ಪತ್ರಗಳು ಉಲ್ಲಂಘಿಸುತ್ತವೆ. ಇಂತಹ ಎಲ್ಲ ಪ್ರಕರಣವನ್ನೂ ಪತ್ತೆ ಹಚ್ಚುವುದು ಸರಕಾರಕ್ಕೆ ಕಷ್ಟ ಸಾಧ್ಯ. ಮಗುವಿಗೆ 14 ವರ್ಷವಾಗಿ ಒಂದೆರಡು ದಿನಗಳಾಗಿದ್ದರೂ ಕೇಸು ದಾಖಲಿಸುವುದಕ್ಕೆ ಕಾನೂನು ಬೆಂಬಲ ನೀಡುವುದಿಲ್ಲ.
ಬಾಲಕಾರ್ಮಿಕ ಪದ್ಧತಿಯ್ನು ಪೋಷಿಸುವಾತ 20 ಸಾವಿರ ರೂಪಾಯಿಯನ್ನು ದಂಡ ರೂಪದಲ್ಲಿ ಬಾಲ ಕಾರ್ಮಿಕ ಪುನರ್ವಸತಿ ಕೇಂದ್ರಕ್ಕೆ ನೀಡಬೇಕು. ಆದರೆ ಈ ಕಾನೂನಿನಿಂದ ಹೆಚ್ಚಿನ ಮಾಲಿಕ ಮಹಾನುಭಾವರಿಗೆ ತೊಂದರೆಯಾಗಿಲ್ಲ. ಲೇಬರ್ ಇನ್ಸ್ಪೆಕ್ಟರ್ಗಳ ಪ್ರಕಾರ ಈ ಕೇಸುಗಳನ್ನು ಮಾಲಿಕರು ಕೋರ್ಟಿಗೆ ದೂಡುವ ಮೂಲಕ ಬಚಾವ್ ಆಗಲು ಯತ್ನಿಸುತ್ತಾರೆ.
ಇದರಿಂದ ಸಾವಿರಾರು ಮಕ್ಕಳನ್ನೂ ಯಾವ ಕಾಯ್ದೆಯೂ ನರಕದಿಂದ ಪಾರು ಮಾಡಿಲ್ಲ. ಪ್ರಸ್ತುತ ಕಾರ್ಮಿಕ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೂ ಬಾಲ ಕಾರ್ಮಿಕರ ಪತ್ತೆಗೆ ಅನಿರೀಕ್ಷಿತ ದಾಳಿ ನಡೆಸಲು ಸೂಚಿಸಿದೆ. ಸುಳ್ಳು ಸರ್ಟಿಫಿಕೇಟ್ಗಳ ಬಗ್ಗೆಯೂ ಒಂದು ಕಣ್ಣಿಟ್ಟಿರುವಂತೆಯೂ ಜಿಲ್ಲಾಡಳಿತಕ್ಕೆ ಹೇಳಲಾಗಿದೆ.
ರಾಜ್ಯದಲ್ಲಿ ಬಾಲಕಾರ್ಮಿಕ ನಿವಾರಣೆಗಾಗಿ 2,050 ಮಂದಿ ಕಾರ್ಮಿಕ ಇನ್ಸ್ಪೆಕ್ಟರ್ಗಳನ್ನು ನೇಮಿಸಲಾಗಿದೆ. ಇವರೆಲ್ಲಾ ರೈಡ್ ನಡೆಸಿ ಆಗಾಗ ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ಅಥವಾ ಮಾಡದೇ ಜಿಲ್ಲಾ ಕಾರ್ಮಿಕ ಉಪ ಆಯುಕ್ತರಿಗೆ ವರದಿ ನೀಡುತ್ತಾರೆ. ಆದರೂ ಹಳ್ಳಿಗಳಲ್ಲಿ ಮಾತ್ರವಲ್ಲ ಪಟ್ಟಣಗಳಲ್ಲಿಯೂ ಪುಟಾಣಿಗಳು ಗ್ಲಾಸ್ ತೊಳೆಯುತ್ತಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications