For Daily Alerts
ಕಾವೇರಿನೀರಿಗಾಗಿ ಸುಪ್ರಿಂಕೋರ್ಟ್ಗೆ:ತಮಿಳುನಾಡು ಸಂಪುಟ ನಿರ್ಧಾರ
ಚೆನ್ನೈ : ಕಾವೇರಿ ನದಿ ನೀರು ಬಿಡುಗಡೆ ಮಾಡುವ ಸಂಬಂಧ ಕರ್ನಾಟಕ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸುಪ್ರಿಂಕೋರ್ಟ್ ಕಟ್ಟೆ ಹತ್ತಲು ತಮಿಳುನಾಡು ಸಚಿವ ಸಂಪುಟ ನಿರ್ಧರಿಸಿದೆ.
ಸುಪ್ರಿಂಕೋರ್ಟ್ನಲ್ಲಿ ದಾವೆ ಹೂಡಲು ತಕ್ಷಣದಿಂದಲೇ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಅಗತ್ಯ ಬಿದ್ದಲ್ಲಿ ಕಾನೂನು ತಜ್ಞರ ಅಭಿಪ್ರಾಯಗಳನ್ನು ಪಡೆಯುವಂತೆ ತಮಿಳುನಾಡು ಅಡ್ವೊಕೇಟ್ ಜನರಲ್ ಅವರಿಗೆ ಸರ್ಕಾರ ಸೂಚಿಸಿದೆ ಎಂದು ಮಂಗಳವಾರ ಹೊರಬಿದ್ದ ಅಧಿಕೃತ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಸರ್ಕಾರದೊಂದಿಗೆ ಕೇಂದ್ರ ಸರ್ಕಾರವನ್ನೂ ನೀರು ಹಂಚಿಕೆ ಕುರಿತ ಪ್ರಕರಣದಲ್ಲಿ ಹೆಸರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ಕುರಿತ ನೊಟೀಸ್ಗಳು ಸದ್ಯದಲ್ಲೇ ಪ್ರತಿವಾದಿಗಳಿಗೆ ತಲುಪಲಿವೆ ಎನ್ನಲಾಗಿದೆ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Tuesday, September 18, 2001, 5:30 [IST]