ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ದುರಂತ: ಪುತ್ತೂರು ಮತ್ತು ಮಂಗಳೂರಿನ ಯುವಕರು ಕ್ಷೇಮ

By Staff
|
Google Oneindia Kannada News

ಮಂಗಳೂರು : ಅಮೆರಿಕಾದಲ್ಲಿ ನೌಕರಿ ಮಾಡುತ್ತಿರುವ ಪುತ್ತೂರು ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಹೇಮಂತ್‌ ಕುಮಾರ್‌(28) ಅವರು ಸುರಕ್ಷಿತವಾಗಿರುವುದಾಗಿ ಗೊತ್ತಾಗಿದೆ.

ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದಿರು ದಾಳಿಯ ಹಿನ್ನೆಲೆಯಲ್ಲಿ ಹೇಮಂತ್‌ ಅವರ ಬಗ್ಗೆ ಮನೆಯವರು, ಬಂಧುಗಳು ಆತಂಕಗೊಂಡಿದ್ದರು.ಕಳೆದ ಎಂಟು ವರ್ಷಗಳಿಂದ ಅವರು ವಿಪ್ರೋ ಕಂಪೆನಿಯಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೇಮಂತ್‌ ಅವರ ಹೆಸರು ಟಿವಿ ಚಾನೆಲ್‌ ಒಂದರಲ್ಲಿ ಕೇಳಿ ಬಂದಿದ್ದು, ಅವರು ದಾಳಿಗೆ ತುತ್ತಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಹೆಚ್ಚಿನ ಮಾಹಿತಿ ಇನ್ನೂ ಗೊತ್ತಾಗಿಲ್ಲ.

ಟಾಟಾ ಕನ್ಸಲ್ಟೆನ್ಸಿಯ ಉದ್ಯೋಗಿ, ಗಣೇಶ್‌ ನಾಯಕ್‌ ಅವರೂ ಯಾವುದೇ ತೊಂದರೆಗೆ ಒಳಗಾಗಿಲ್ಲ . ವಿಶ್ವವ್ಯಾಪಾರ ಕೇಂದ್ರದ ಬಳಿಯೇ ಎನ್‌ವೈಸಿ ಬ್ಯಾಂಕ್‌ನಲ್ಲಿ ಪ್ರೊಜೆಕ್ಟ್‌ ಒಂದರ ಮೇಲೆ ಅವರು ಕೆಲಸ ಮಾಡಲು ಕಳೆದ ಆಗಸ್ಟ್‌ನಲ್ಲಿ ಅಮೆರಿಕಾಕ್ಕೆ ತೆರಳಿದ್ದರು.

ಮಂಗಳೂರಿನ ಸುಚೇತಾ ಅಮೀನ್‌ ಮತ್ತು ನೊಯಿಲ್‌ ವಾಸ್‌, ವಿಟ್ಲದ ಸಾಫ್ಟ್‌ವೇರ್‌ ಇಂಜಿನಿಯರ್‌ ನಾರಾಯಣ ಜಿ. ಹೆಗ್ಡೆ ಮತ್ತು ಅವರ ಬಂಧು, ಗಜಾನನ ಹೆಗ್ಡೆ ಕೂಡ ಸುರಕ್ಷಿತರ ಪಟ್ಟಿಯಲ್ಲಿರುವುದಾಗಿ ವರದಿಯಾಗಿದೆ.

(ಇನ್ಫೋ ವಾರ್ತೆ)

Post Your Views

ಮುಖಪುಟ / ಭಯೋತ್ಪಾದನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X