ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಮೆರಿಕಾ ದುರಂತ: ಪುತ್ತೂರು ಮತ್ತು ಮಂಗಳೂರಿನ ಯುವಕರು ಕ್ಷೇಮ
ಮಂಗಳೂರು : ಅಮೆರಿಕಾದಲ್ಲಿ ನೌಕರಿ ಮಾಡುತ್ತಿರುವ ಪುತ್ತೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಹೇಮಂತ್ ಕುಮಾರ್(28) ಅವರು ಸುರಕ್ಷಿತವಾಗಿರುವುದಾಗಿ ಗೊತ್ತಾಗಿದೆ.
ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದಿರು ದಾಳಿಯ ಹಿನ್ನೆಲೆಯಲ್ಲಿ ಹೇಮಂತ್ ಅವರ ಬಗ್ಗೆ ಮನೆಯವರು, ಬಂಧುಗಳು ಆತಂಕಗೊಂಡಿದ್ದರು.ಕಳೆದ ಎಂಟು ವರ್ಷಗಳಿಂದ ಅವರು ವಿಪ್ರೋ ಕಂಪೆನಿಯಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೇಮಂತ್ ಅವರ ಹೆಸರು ಟಿವಿ ಚಾನೆಲ್ ಒಂದರಲ್ಲಿ ಕೇಳಿ ಬಂದಿದ್ದು, ಅವರು ದಾಳಿಗೆ ತುತ್ತಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಹೆಚ್ಚಿನ ಮಾಹಿತಿ ಇನ್ನೂ ಗೊತ್ತಾಗಿಲ್ಲ.
ಟಾಟಾ ಕನ್ಸಲ್ಟೆನ್ಸಿಯ ಉದ್ಯೋಗಿ, ಗಣೇಶ್ ನಾಯಕ್ ಅವರೂ ಯಾವುದೇ ತೊಂದರೆಗೆ ಒಳಗಾಗಿಲ್ಲ . ವಿಶ್ವವ್ಯಾಪಾರ ಕೇಂದ್ರದ ಬಳಿಯೇ ಎನ್ವೈಸಿ ಬ್ಯಾಂಕ್ನಲ್ಲಿ ಪ್ರೊಜೆಕ್ಟ್ ಒಂದರ ಮೇಲೆ ಅವರು ಕೆಲಸ ಮಾಡಲು ಕಳೆದ ಆಗಸ್ಟ್ನಲ್ಲಿ ಅಮೆರಿಕಾಕ್ಕೆ ತೆರಳಿದ್ದರು.
(ಇನ್ಫೋ ವಾರ್ತೆ)
Post Your Views
ಮುಖಪುಟ / ಭಯೋತ್ಪಾದನೆ
Comments
Story first published: Monday, September 17, 2001, 5:30 [IST]