ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಹೊಳೆ ಅರಣ್ಯದ ಗಿರಿಜನರಿಗೆ ಕೊಡಗಿನಲ್ಲಿ ಪುನರ್ವಸತಿ

By Staff
|
Google Oneindia Kannada News

ಮಡಿಕೇರಿ : ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ನಿರ್ಮಾಣಕ್ಕಾಗಿ ಸ್ಥಳಾಂತರಗೊಂಡ ಗಿರಿಜನರ ಕುಟುಂಬಗಳಿಗೆ ಪುನರ್ವತಿ ಕಲ್ಪಿಸಲು ಕೊಡಗು ಜಿಲ್ಲಾ ಪಂಚಾಯತ್‌ ಮುಂದೆ ಬಂದಿದೆ.

ದಕ್ಷಿಣ ಕೊಡಗಿನ ವೆಸ್ಟ್‌ ನೆಮ್ಮಲೆ ಮತ್ತು ಮಜ್ಜಿಗೆ ಹಳ್ಳಿಯಲ್ಲಿ ಪುನರ್ವಸತಿ ಒದಗಿಸುವ ನಿರ್ಧಾರವನ್ನು ಕೊಡಗು ಜಿಲ್ಲಾ ಪಂಚಾಯತ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾದಿಕಾರಿ ಜಿ. ವಿ. ರಾಮಚಂದ್ರ ಅವರ ಹೇಳಿಕೆಯ ಮೂಲಕ ನಿರ್ಣಯವನ್ನು ಅಂಗೀಕರಿಸಲಾಯಿತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಾಗಿರುವ 1,690 ಗಿರಿಜನ ಕುಟುಂಬಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ. 45 ಕುಟುಂಬಗಳನ್ನು ಮಡೆನೂರು ವ್ಯಾಪ್ತಿಯಿಂದ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿ ಗ್ರಾಮದ ನಾಗಾಪುರ ಎಂಬಲ್ಲಿಗೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸುವ ಕಾರ್ಯ ನಡೆದಿರುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಲದೇವ ಕೃಷ್ಣ ಹೇಳಿದ್ದಾರೆ.

(ಇನ್ಫೋವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X