ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಪರಿಸರದಲ್ಲಿ ಯಂತ್ರಗಳನ್ನು ಬಳಸಿ ಮರಳೆತ್ತುವುದಕ್ಕೆ ನಿಷೇಧ

By Staff
|
Google Oneindia Kannada News

ಮಂಗಳೂರು : ಪರಿಸರ, ಭೂಜಲ ಮತ್ತು ಕರಾವಳಿ ಜನರ ಜನೋಪಯೋಗಿ ಕಸುಬುಗಳಿಗೆ ಮಾರಕವಾಗುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ಯಂತ್ರಗಳನ್ನು ಬಳಸಿ ಮರಳು ಎತ್ತುವುದನ್ನು ನಿಷೇಧಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿ ಜೆಸಿಬಿ, ಡ್ರಜಿಂಗ್‌ ಯಂತ್ರಗಳನ್ನು ಬಳಸಿ ಹೊಯ್ಗೆ ತೆಗೆಯುವುದನ್ನು ನಿಷೇಧಿಸಿ ರಾಜ್ಯ ಭೂವಿಜ್ಞಾನ ಮತ್ತು ಗಣಿಗಾರಿಕಾ ಇಲಾಖೆ ಹೊರಡಿಸಿದ ಆಜ್ಞೆ ಸಂವಿಧಾನ ಬದ್ಧ ಮತ್ತು ನ್ಯಾಯಬದ್ಧ ಎಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನಿಡಿದೆ.

ಇಲಾಖೆಯ ಆಜ್ಞೆಯನ್ನು ಪ್ರಶ್ನಿಸಿ ಇದು ಸಂವಿಧಾನ ಬಾಹಿರ, ಅಲ್ಲದೆ ಪ್ರಸ್ತುತ ಜಾರಿಯಲ್ಲಿರುವ ಲೈಸನ್ಸ್‌ದಾರರಿಗೆ ಈ ಗಣಿಗಾರಿಕೆಯ ನಿಷೇಧಾಜ್ಞೆ ಅನ್ವಯಿಸುವುದಿಲ್ಲ ಎಂಬ ವಾದವನ್ನು ಕೋರ್ಟ್‌ ತಳ್ಳಿ ಹಾಕಿದೆ. ಆ ಪ್ರಕಾರ ಕರಾವಳಿ ಪ್ರದೇಶದಲ್ಲಿ ಭಾರೀ ಯಂತ್ರಗಳನ್ನು ಬಳಸಿ ಮರಳು ಎತ್ತುವುದು ಕಾನೂನು ಬಾಹಿರವೆಂದು ಪರಿಗಣಿಸಲಾಗುವುದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X