ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ಪೂರೈಕೆ ವಿಫಲ : ಕತ್ತಲ ಕೂಪದಲ್ಲಿ ಮುಳುಗಿದ ಕರ್ನಾಟಕ

By Staff
|
Google Oneindia Kannada News

ಬೆಂಗಳೂರು : ಕೇಂದ್ರ ವಿದ್ಯುತ್‌ ಜಾಲ ವಿಫಲಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಭಾಗಗಳು ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಬೆಳಗಿನವರೆಗೂ ಕತ್ತಲೆಯಲ್ಲಿ ಮುಳುಗಿದ್ದವು. ಕೇಂದ್ರ ವಿದ್ಯುತ್‌ ಜಾಲದಿಂದ ಲಭಿಸುವ ಸುಮಾರು 700 ರಿಂದ 800 ಮೆಗಾವ್ಯಾಟ್‌ ವಿದ್ಯುತ್‌ ಪೂರೈಕೆ ವಿಫಲವಾದ ಹಿನ್ನೆಲೆಯಲ್ಲಿ ಈ ತೊಂದರೆ ಉಂಟಾಯಿತು.

ಕೇಂದ್ರ ವಿದ್ಯುತ್‌ ಜಾಲದ ವೈಫಲ್ಯದ ಜೊತೆಗೆ ಆರ್‌ಟಿಪಿಎಸ್‌ ಹಾಗೂ ಕೈಗಾ ವಿದ್ಯುತ್‌ ಕೇಂದ್ರಗಳು ಸೇರಿದಂತೆ ರಾಜ್ಯದ ಎಲ್ಲ ಜಲ ವಿದ್ಯುತ್‌ ಕೇಂದ್ರಗಳ ಚಟುವಟಿಕೆಯೂ ಸ್ಥಗಿತಗೊಂಡಿದ್ದರಿಂದ ವಿದ್ಯುತ್‌ ಸರಬರಾಜು ಸಮಸ್ಯೆ ಉಲ್ಬಣಗೊಂಡಿತು ಎಂದು ಕೆಪಿಟಿಸಿಎಲ್‌ ಹೆಚ್ಚುವರಿ ಕಾರ್ಯದರ್ಶಿ ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

ಬುಧವಾರ ಆರ್‌ಟಿಪಿಎಸ್‌ ಪುನಃ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದ್ದು , ವಿದ್ಯುತ್‌ ವ್ಯವಸ್ಥೆ ಸುಧಾರಿಸುವ ನಿರೀಕ್ಷೆಯಿದೆ. ಗ್ರಿಡ್‌ ಸಮಸ್ಯೆಯಿಂದಾಗಿ ಕೈಗಾ ವಿದ್ಯುತ್‌ ಸ್ಥಾವರ ಸ್ಥಗಿತಗೊಂಡಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X