ಈ ಕೆಲಸ ನನ್ನದಲ್ಲ, ಮಾಡಿರುವವರಿಗೆ ಜಿಂದಾಬಾದ್- ಬಿನ್ ಲ್ಯಾಡೆನ್
ನಾನು ಈ ಕೃತ್ಯ ಎಸಗಿಲ್ಲ. ಆದರೆ ಯಾವ ಮಹಾನುಭಾವರು ಈ ಒಳ್ಳೆ ಕೆಲಸ ಮಾಡಿದ್ದಾರೋ, ಅವರಿಗೆ ಜಿಂದಾಬಾದ್. ತುಳಿತಕ್ಕೆ ಸಿಕ್ಕವರು ಸಿಡಿದೆದ್ದರೆ, ತುಳಿದು ಅಟ್ಟಹಾಸ ಹಾಕುವವರ ಗತಿ ಹೀಗೆ ಆಗೋದು. ಹೀಗೆ ಆಗುವುದೇ ಸರಿ ಎಂದು ಅಮೆರಿಕಾ ಮೇಲಿನ ದಾಳಿ ಕುರಿತು ಬಿನ್ ಲ್ಯಾ-ಡೆನ್ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನಿ ಉರ್ದು ಪತ್ರಿಕೆ ಔಸಫ್ನ ಸಂಪಾದಕ ಹಮೀದ್ ಮಿರ್, ಲ್ಯಾ-ಡೆನ್ ವಕ್ತಾರ ಹೇಳಿರುವ ಮಾತುಗಳನ್ನು ಯಥಾವತ್ತು ಬರೆದಿದ್ದಾರೆ. ಈ ಮಾತುಗಳನ್ನು ಖುದ್ದು ಲ್ಯಾ-ಡೆನ್ ಅರೇಬಿಕ್ ಭಾಷೆಯಲ್ಲಿ ಬರೆದಿ-ದ್ದು, ಅದನ್ನು ವಕ್ತಾರ ಉರ್ದು ಭಾಷೆಗೆ ತರ್ಜುಮೆ ಮಾಡಿ ಹಮೀದ್ ಮಿರ್ ಮುಂದೆ ಓದಿದ್ದಾನೆ ಎಂದು ಔಸಫ್ ಬರೆದುಕೊಂಡಿದೆ.
ಪತ್ರಿಕೆ ಪ್ರಕಟಿಸಿರುವ ಲ್ಯಾಡನ್ ಹೇಳಿಕೆಯ ಸಾರ ಹೀಗಿದೆ...
- ಅಮೆರಿಕಾ ಧಾಳಿಯಲ್ಲಿ ನನ್ನ ಕೈವಾಡವಿಲ್ಲ. ನನಗೆ ಗೊತ್ತಿರುವ ಯಾರೂ ಈ ಕೆಲಸ ಮಾಡಿಲ್ಲ. ಆದರೆ ಯಾರು ಮಾಡಿರುವರೋ ಅವರು ‘ಗ್ರಸ್ತರು’.
- ಈ ದುರಂತದಲ್ಲಿ ಸಾವಿರಾರು ಅಮಾಯಕರು ಸತ್ತಿದ್ದಾರೆ ನಿಜ. ಆದರೆ, ಇದೇ ಅಮೆರಿಕಾದ ಭಯೋತ್ಪಾದಕ ಚಟುವಟಿಕೆಗಳಿಂದ ಸತ್ತ ಪ್ಯಾಲಸ್ಟೀನಿಯರೂ ಅಮಾಯಕರೇ ಅಲ್ಲವೇ?
- ನನಗೂ ಈ ಧಾಳಿಗೂ ಸಂಬಂಧಿವಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದೇನೆ. ಹೀಗಿದ್ದೂ ನನ್ನನ್ನು ಕೊಲ್ಲಲು ಯತ್ನಿಸಿದಲ್ಲಿ ಅಮೆರಿಕಾವನ್ನು ಆ ದೇವರೂ ಕಾಪಾಡಲು ಸಾಧ್ಯವಿಲ್ಲ.
- ಒಬ್ಬ ಒಸಾಮನನ್ನು ಅಮೆರಿಕದವರು ಕೊಂದರೆ, ನೂರಾರು ಒಸಾಮಗಳು ಅವರಿಗೆ ಗತಿ ಕಾಣಿಸಲು ಎದ್ದು ನಿಲ್ಲುತ್ತಾರೆ.
- ನಾನು ಹೂಡಿರುವುದು ಪವಿತ್ರ ಯುದ್ಧ (ಜೆಹಾದ್). ಅದರಲ್ಲಿ ಜಯ ನನ್ನದೇ. ಜಗತ್ತಿನ ವಿವಿಧ ಮುಸ್ಲಿಂ ಬಂಧುಗಳು ನನ್ನ ಜೊತೆಗಿದ್ದಾರೆ. ಇವರಲ್ಲಿ ಜಗಜ್ಜಾಣರೂ ಅಸಂಖ್ಯ. ವಿಜ್ಞಾನಿಗಳು, ಎಂಜಿನಿಯರುಗಳು, ಸಂಶೋಧಕರೂ ಜೆಹಾದ್ನಲ್ಲಿ ನನ್ನ ಅನುಯಾಯಿಗಳು. ಆತ್ಮಹತ್ಯಾ ದಳದ ಸದಸ್ಯರಾಗಲು ನಾ ಮುಂದು ತಾಮುಂದು ಎನ್ನುತ್ತಾರೆ.
- ನಮ್ಮ ಹತ್ತಿರ ರಾಸಾಯನಿಕ ಶಸ್ತ್ರಾಸ್ತ್ರಗಳಿಲ್ಲ. ಆದರೆ ನೈತಿಕ ಸ್ಥೈರ್ಯ ಯಾವ ನ್ಯೂಕ್ಲಿಯರ್ ಬಾಂಬಿನ ಶಕ್ತಿಗೂ ಕಡಿಮೆಯಿಲ್ಲ. ಅಮೆರಿಕ ತನ್ನ ನಿಯಮಗಳನ್ನು, ಸಂಹಿತೆಗಳನ್ನು ಬದಲಿಸಲಿ. ಇಸ್ಲಾಂ ವಿರೋಧಿ ನಿಲುವನ್ನು ತ್ಯಜಿಸಲಿ. ಇದು ನನ್ನ ಕಟ್ಟೊತ್ತಾಯ.
ತಾಲಿಬಾನ್ ಸರ್ಕಾರ ಅಮೆರಿಕವನ್ನು ಬೇಡಿದರೆ, ಬಿನ್ --ಲ್ಯಾಡೆನ್ ಎಚ್ಚರಿಕೆ ಕೊಡುತ್ತಾನೆ. ಅಮೆರಿಕ ಮುಂದಿನ ಗುರಿ ಬಿನ್ ಲ್ಯಾ-ಡೆನ್ ಎಂಬುದು ಬಲವಾಗುತ್ತಿದೆ. ಇದು ಜೆಹಾದ್. ಬಿನ್ ವರ್ಸಸ್ ಅಮೆರಿಕ. ಕ್ಷಣಗಣನೆ ಪ್ರಾರಂಭವಾಗಿದೆ !
(ಏಜೆ-ನ್ಸೀ-ಸ್)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications