ಅಮೆರಿಕಾದಲ್ಲಿ ನನ್ನಿಬ್ಬರು ಮಕ್ಕಳಿದ್ದಾರೆ, ಅವರು ಚೆನ್ನಾಗಿದ್ದಾರಾ?
ಬೆಂಗಳೂರು : ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಕಟ್ಟಡದ ಮೇಲೆ ಉಗ್ರಗಾಮಿಗಳು ಮಂಗಳವಾರ ನಡೆಸಿದ ಸರಣಿ ಬಾಂಬ್ ದಾಳಿಯ ಸುದ್ದಿ ತಲುಪುತ್ತಿದ್ದಂತೆಯೇ ಅಮೆರಿಕದಲ್ಲಿನ ತಮ್ಮ ಸಂಬಂಧಿಕರ, ವ್ಯವಹಾರ ಸಂಬಂಧಿ ಕಚೇರಿಗಳ ಕುಶಲದ ಬಗ್ಗೆ ಬೆಂಗಳೂರಿಗರು ತೀವ್ರ ಆತಂಕಗೊಂಡಿದ್ದಾರೆ. ಈ ಕುರಿತ ಹಲವು ವಿಚಾರಣೆಗಳು ಮಾಧ್ಯಮ ಕಚೇರಿಗಳನ್ನು ತಲುಪುತ್ತಿವೆ.
ಅಮೆರಿಕಾ ಮೂಲದ ಸಾಕಷ್ಟು ಉದ್ಯಮಗಳು ಬೆಂಗಳೂರಿನಲ್ಲಿರುವುದರಿಂದ ಅಲ್ಲದೆ ಅಲ್ಲಿನ ಉದ್ಯಮ ಸ್ಥಿತಿ ಗತಿಯ ಮೇಲೆ ಬೆಂಗಳೂರಿನ ಕೆಲವು ಉದ್ಯಮಗಳು ಆಧರಿಸಿರುವುದರಿಂದ ಅಮೆರಿಕಾಕ್ಕೆ ಫೋನ್ ಹಚ್ಚುವುದು, ಟೀವಿ ಚಾನೆಲ್ಗಳನ್ನು ತಡಕಾಡುವುದು, ಅವಕಾಶವಿದ್ದವರು ವೆಬ್ಸೈಟ್ನ ಮೊರೆಹೋಗುವುದು ನಡೆದಿದೆ. ಇನ್ಫೋಸಿಸ್ನ ಅಧ್ಯಕ್ಷ ನಾರಾಯಣ ಮೂರ್ತಿ ಅವರು ಮಧ್ಯ ಏಷ್ಯಾ ಪ್ರವಾಸದಲ್ಲಿದ್ದು, ಅವರ ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.
ಮಂಗಳವಾರ ರಾತ್ರಿಯೆಲ್ಲಾ ಆಗಾಗ ವಿದ್ಯುತ್ ಕೈಕೊಡುತ್ತಿದ್ದ ಪರಿಣಾಮವಾಗಿ ಅಮೆರಿಕಾದ ದುರಂತವನ್ನು ಟೀವಿಯಲ್ಲಿ ನೋಡುವುದಕ್ಕೂ ಸಾಧ್ಯವಾಗದೇ ಬೆಂಗಳೂರಿಗರು ಅಕ್ಷರಶಃ ಕತ್ತಲಲ್ಲಿ ಮುಳುಗಿದ್ದರು. 24 ಗಂಟೆ ಸುದ್ದಿ ಒದಗಿಸುವ ಚಾನೆಲ್ಗಳಿದ್ದರೂ ದುರಂತದ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾಗಲಿಲ್ಲ.
ನಗರದ ನಿವಾಸಿ, ಗೃಹಿಣಿಯಾಬ್ಬರು, ಅಮೆರಿಕಾದಲ್ಲಿ ಬೆಳಗ್ಗೆಯೇ ಈ ಘಟನೆ ಸಂಭವಿಸಿರುವುದರಿಂದ ಅಲ್ಲಿ ಕೆಲಸ ಮಾಡುತ್ತಿರುವ ತಮ್ಮಿಬ್ಬರು ಮಕ್ಕಳ ಬಗೆಗೆ ಆತಂಕಗೊಂಡಿರುವುದಾಗಿ ಹೇಳಿದರು. ಇಂಟರ್ನೆಟ್ ಚ್ಯಾಟ್ ಬಾಕ್ಸ್ಗಳಲ್ಲಿಯೂ ಅಮೆರಿಕಾ ದುರಂತದ ಬಗ್ಗೆ ಆತಂಕ, ಕಳವಳಗಳ ಮಾತುಗಳೇ ತುಂಬಿದ್ದವು. ಅಮೆರಿಕಾದಲ್ಲಿ ಸಂಬಂಧಿಕರ ಫೋನ್ ಕರೆಗಳಿಗಾಗಿ ಕಾಯುತ್ತಿದ್ದವರ ಸಂಖ್ಯೆಯೂ ಸಾಕಷ್ಟಿತ್ತು.
ಅಮೆರಿಕಾ ದುರಂತದ ಬಗ್ಗೆ ತಮ್ಮ ಬಂಧುಗಳು ಹಾಗೂ ವ್ಯವಹಾರ ಸಂಬಂಧಿ ಘಟನೆಗಳ ಬಗ್ಗೆ ತಿಳಿದುಕೊಳ್ಳಬಯಸುವವರು ಅಮೆರಿಕನ್ ಏರ್ಲೈನ್ಸ್ ಫೋನ್ ನಂಬರ್ಗೆ ಡಯಲ್ ಮಾಡಬಹುದು. ( 1-800-245-0999, 1-800-932-85555)
(ಇನ್ಫೋ ಇನ್ಸೈಟ್)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications