Get Updates
Get notified of breaking news, exclusive insights, and must-see stories!

ಅನಂತಮೂರ್ತಿ, ಹರಿಖೋಡೆ ನೇತೃತ್ವದಲ್ಲಿ ಜೆ.ಎಚ್‌. ಪಟೇಲ್‌ ಪ್ರತಿಷ್ಠಾನ

ಮೈಸೂರು : ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ. ಎಚ್‌. ಪಟೇಲ್‌ ಅವರ ಸ್ಮರಣಾರ್ಥ ಜೆ. ಎಚ್‌. ಪಟೇಲ್‌ ಪ್ರತಿಷ್ಠಾನವನ್ನು ಬಿಜಾಪುರದ ಕೂಡಲಸಂಗಮದಲ್ಲಿ ಅಕ್ಟೋಬರ್‌ 1ರಂದು ಔಪಚಾರಿಕವಾಗಿ ಉದ್ಘಾಟಿಸಲಾಗುವುದು.

ಗುಂಡ್ಲುಪೇಟೆ ಶಾಸಕ ಎಚ್‌. ಎಸ್‌. ಮಹದೇವ್‌ ಪ್ರಸಾದ್‌ ಈ ವಿಷಯವನ್ನು ಸೋಮವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರತಿಷ್ಠಾನದ ನೇತೃತ್ವವನನ್ನು ಸಾಹಿತಿ. ಡಾ. ಯು.ಆರ್‌. ಅನಂತ ಮೂರ್ತಿ, ಕೈಗಾರಿಕೋದ್ಯಮಿ ಕೆ.ಎಲ್‌. ಹರಿಖೋಡೆ, ಶಾಸಕ ಮಹದೇವ್‌ ಪ್ರಸಾದ್‌ ಹಾಗೂ ಪಟೇಲರ ಮಗ, ಮಹಿಮಾ ಪಟೇಲ್‌ ವಹಿಸಲಿದ್ದಾರೆ.

ಪ್ರತಿಷ್ಠಾನವು ಜೆ. ಎಚ್‌. ಪಟೇಲರನ್ನು ಕುರಿತು ಸಾಕ್ಷ್ಯಚಿತ್ರವನ್ನು ಹೊರತರಲಿದೆ. ಮಾಧ್ಯಮಗಳಿಂದ ಹಾಗೂ ಸಾಹಿತಿಗಳಿಂದ ಪಟೇಲರ ಬಗೆಗೆ ಲೇಖನಗಳನ್ನು ಆಹ್ವಾನಿಸಲಾಗಿದ್ದು, ಇವುಗಳನ್ನು ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.

ಮಾದರಿ ಊರುಗಳನ್ನು ನಿರ್ಮಿಸಲು ಹಳ್ಳಿಗಳ ದತ್ತು ಸ್ವೀಕಾರ , ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಗಲಿದ ನಾಟಕ ಪಟೇಲರ ಸ್ಮರಣಾರ್ಥ ಸ್ಮಾರಕ ನಿರ್ಮಾಣ, ಪಟೇಲರ ಹುಟ್ಟೂರು, ಕರಿಗನೂರು ಹಳ್ಳಿಯಲ್ಲಿ ಪಟೇಲರ ಪತ್ರಗಳು, ಭಾಷಣಗಳು, ಫೋಟೋಗಳು, ಸಂಗ್ರಹಗಳು ಮತ್ತು ಪುಸ್ತಕಗಳ ವಸ್ತುಸಂಗ್ರಹಾಲಯ ತೆರೆಯಲಾಗುವುದು. ರಾಮಮನೋಹರ ಲೋಹಿಯಾರ ಪುಣ್ಯ ತಿಥಿ ಆಚರಣೆ, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಸಮಾಜವಾದ ಶಾಲೆಗಳ ಸ್ಥಾಪನೆ ಇವು ಸದ್ಯಕ್ಕೆ ಪ್ರತಿಷ್ಠಾನದ ಕಾರ್ಯ ಸೂಚಿಯಲ್ಲಿವೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+