ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮಬಂಗಾಳ:ಎಬಿವಿಪಿ ಕಾರ್ಯಕರ್ತರಿಂದ ಮಿಷನರಿ ಸಾಹಿತ್ಯಕ್ಕೆ ಬೆಂಕಿ

By Staff
|
Google Oneindia Kannada News

ಹೌರಾ: ಶಾಲಾ ವಿದ್ಯಾರ್ಥಿಗಳಿಗೆ ತಕ್ಕುದಲ್ಲದ ಸಾಹಿತ್ಯವನ್ನು ಹೊಂದಿವೆ ಎನ್ನಲಾದ ಕ್ರಿಶ್ಚಿಯನ್‌ ಬುಕ್‌ಲೆಟ್‌ಗಳನ್ನು ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಕಾರ್ಯಕರ್ತರು ಪಶ್ಚಿಮಬಂಗಾಳದ ಹೌರಾ ಜಿಲ್ಲೆಯ ಉಲುಬೇರಿಯಾದಲ್ಲಿ ಸೋಮವಾರ ಸುಟ್ಟುಹಾಕಿದ್ದಾರೆ.

ಇತ್ತೀಚೆಗೆ ಕ್ರಿಶ್ಚಿಯನ್‌ ಮಿಷನರಿಗಳು ಈ ಪ್ರದೇಶದಲ್ಲಿ ನ ಏಳು ಶಾಲೆಗಳಲ್ಲಿ ವಿತರಿಸಿದ್ದ ಬುಕ್‌ಲೆಟ್‌ಗಳನ್ನು ಹಿಂತಿರುಗಿಸುವಂತೆ ಎಬಿವಿಪಿ ಒತ್ತಾಯಿಸಿದ್ದು , ಉಲ್ಬೇರಿಯಾ ಶಾಲೆಯಲ್ಲಿದ್ದ ಭಾರೀ ಸಂಖ್ಯೆಯ ಕ್ರಿಶ್ಚಿಯನ್‌ ಸಾಹಿತ್ಯದ ಬುಕ್‌ಲೆಟ್‌ಗಳನ್ನು ಪತ್ತೆ ಹಚ್ಚಿ ,ಅವುಗಳನ್ನು ಎಬಿವಿಪಿ ಕಾರ್ಯಕರ್ತರು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಷನರಿಗಳು ವಿತರಿಸಿದ್ದ ಸಾಹಿತ್ಯ ಯುವ ಮನಸ್ಸುಗಳಿಗೆ ಹಾನಿಕರವಾಗಿತ್ತು ಹಾಗೂ ಶಾಲಾ ಪರಿಸರವನ್ನು ಮಲಿನಗೊಳಿಸುವಂತಿತ್ತು ಎಂದು ಸ್ಥಳೀಯ ಬಿಜೆಪಿ ಮುಖಂಡ ಸಮೀರ್‌ ಹೈಟ್‌ ತಿಳಿಸಿದ್ದಾರೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X