Get Updates
Get notified of breaking news, exclusive insights, and must-see stories!

ವಿವಿ ಕಾಯ್ದೆಗೆ ತಿದ್ದುಪಡಿ ಅಗತ್ಯವಿತ್ತೆ - ವಿವರಣೆ ಕೇಳಿದ ರಮಾದೇವಿ

ಬೆಂಗಳೂರು : ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರುವ ಅನಿವಾರ್ಯತೆ ಇತ್ತೇ ಎಂಬ ಬಗ್ಗೆ ರಾಜ್ಯಪಾಲರಾದ ವಿ.ಎಸ್‌. ರಮಾದೇವಿಯವರು ಸ್ಪಷ್ಟೀಕರಣ ಕೇಳಿದ್ದಾರೆ.

ತಿದ್ದುಪಡಿಗೆ ಸಂಬಂಧಿಸಿದಂತೆ ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕಾರಗೊಂಡ ವಿಶ್ವ ವಿದ್ಯಾಲಯಗಳ ವಿಧೇಯಕ- 2000 ಸಂಬಂಧ ರಾಜ್ಯಪಾಲರು ಸ್ಪಷ್ಟೀಕರಣ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗೆ ಈ ಹೊಸ ಕಾಯ್ದೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂಬ ಬಗ್ಗೆ ವಿವರಣೆ ಕೇಳಿದ್ದಾರೆ.

  • ಕುಲಪತಿಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ರಾಜ್ಯಪಾಲರಿಂದ ಕಸಿದುಕೊಂಡರೆ ಕ್ರಾಂತಿಕಾರಕ ಬದಲಾವಣೆ ಸಾಧ್ಯವಿದೆಯೇ?
  • ಸೆನೆಟ್‌ ವ್ಯವಸ್ಥೆ ರದ್ದುಗೊಳಿಸಿದರೆ ವಿವಿ ಪರಿಸ್ಥಿತಿ ಸುಧಾರಿಸುತ್ತದೆಯೇ ?
  • ಈಗಿರುವ ವಿವಿ ಕಾಯ್ದೆಯಲ್ಲಿ ಏನೇನು ದೋಷಗಳಿದ್ದವು?
ಈ ಮೂರು ಮುಖ್ಯ ಪ್ರಶ್ನೆಗಳ ಜೊತೆಗೆ, ಯಾವ ವಿವರಣೆಯನ್ನೂ ನೀಡದೆ ಸರಕಾರ ಕಾಯ್ದೆ ತಿದ್ದುಪಡಿ ತರಲು ಯತ್ನಿಸಿರುವುದು ಒಳ್ಳೆ ಸಂಪ್ರದಾಯ ಅಲ್ಲ ಎಂದು ಕಟು ಶಬ್ದಗಳಲ್ಲಿ ರಾಜ್ಯಪಾಲರು ಟೀಕಿಸಿದ್ದಾರೆ. ರಾಜ್ಯಪಾಲರ ಈ ಪತ್ರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಡ್ವೊಕೇಟ್‌ ಜನರಲ್‌ ಅವರಿಂದ ವರದಿ ಪಡೆಯಲು ನಿರ್ಧರಿಸಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+