ನ್ಯೂಜಿಲೆಂಡಲ್ಲಿ ಓದಬೇಕೆ? ಸೆ. 16ರಂದು ಬೆಂಗಳೂರಲ್ಲಿ ಸಂದರ್ಶನವಿದೆ
ಬೆಂಗಳೂರು : ಸೆಪ್ಟೆಂಬರ್ 16 ಹಾಗೂ 17ರಂದು ನಗರದ ಲೀ ಮೆರಿಡಿಯನ್ ಹೊಟೇಲಿನಲ್ಲಿ ನ್ಯೂಜಿಲೆಂಡ್ ಶಿಕ್ಷಣ ಮೇಳ ನಡೆಯಲಿದೆ. ನ್ಯೂಜಿಲೆಂಡಿನಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಓದುವ ಬಯಕೆ ಇರುವವರಿಗೆ ಇದೊಂದು ಅಪರೂಪದ ಅವಕಾಶ. ಭಾರತದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಬ್ರಿಟನ್ ಹಾಗೂ ಆಸ್ಟ್ರೇಲಿಯಾ ಜಾಡನ್ನು ಇದೀಗ ನ್ಯೂಜಿಲೆಂಡ್ ಕೂಡ ಹಿಡಿದಿದೆ.
ನ್ಯೂಜಿಲೆಂಡ್ನ ಉದ್ದಿಮೆ ಆಯುಕ್ತ ಹಾಗೂ ವಾಣಿಜ್ಯ ಸಲಹೆಗಾರ ಪೀಟರ್ ಹೀಲಿ ಆಂಗ್ಲ ಪತ್ರಿಕೆಯಾಂದಕ್ಕೆ ಈ ವಿಷಯ ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ಆಹಾರ ತಂತ್ರಜ್ಞಾನ, ಅಧ್ಯಾಪನಾ ವೃತ್ತಿ, ಶುಶ್ರೂಷೆ ಹಾಗೂ ಕಾನೂನು ಕ್ಷೇತ್ರಗಳಿಗೆ ನ್ಯೂಜಿಲೆಂಡಿನಲ್ಲಿ ಸಾಕಷ್ಟು ಬೇಡಿಕೆಯಿದೆ. ಆದರೆ ಸ್ಥಳೀಯರಲ್ಲಿ ಸಾಕಷ್ಟು ಪರಿಣತಿ ಇಲ್ಲದ್ದರಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ರೂಪಿಸುವ ಉದ್ದೇಶ ನಮ್ಮದಾಗಿದೆ ಎಂದು ಹೀಲಿ ಹೇಳಿದ್ದಾರೆ.
ಫೋರ್ಡ್ನ ಚೆನ್ನೈ ವಿಭಾಗದ ಜನರಲ್ ಮೇನೇಜರ್, ಡಿ ಬಿಯರ್ಸ್ನ ಸಿಇಓ, ವರ್ಜಿನ್ ಅಟ್ಲಾಂಟಾದ ಪ್ರಾಂತೀಯ ಮೇನೇಜರ್ ಮೊದಲಾದ ಕಾರ್ಪೊರೇಟ್ ದಿಗ್ಗಜರು ಓದಿರುವುದು ನ್ಯೂಜಿಲೆಂಡಿನಲ್ಲೇ. ಅಲ್ಲಿ ವಿದ್ಯಾಭ್ಯಾಸದ ಖರ್ಚು ಕಡಿಮೆ. ವಾರಕ್ಕೆ 13 ತಾಸು ಪಾರ್ಟ್ ಟೈಂ ಕೆಲಸಕ್ಕೂ ಹೋಗಬಹುದು. ಪಾರ್ಟ್ ಟೈಂ ಕೆಲಸಗಳಿಗೇನೂ ಕೊರತೆಯಿಲ್ಲ. ಓದು ಮುಗಿದ ನಂತರ ಕನಿಷ್ಠ ಎರಡು ವರ್ಷ ನ್ಯೂಜಿಲೆಂಡಿನಲ್ಲೇ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿ ಒಬ್ಬ ಅಂತರರಾಷ್ಟ್ರೀಯ ಪರಿಣತನಾಗಿ ರೂಪುಗೊಳ್ಳುವ ಅಪರೂಪದ ಅವಕಾಶವಿದು ಎಂಬುದು ಹೀಲಿ ಅಭಿಪ್ರಾಯ.
ಅಂದಹಾಗೆ, ಅಲ್ಲಿ ಓದಲು ನ್ಯೂಜಿಲೆಂಡ್ ಯಾವುದೇ ವಿದ್ಯಾರ್ಥಿ ವೇತನ ನೀಡುವುದಿಲ್ಲ ಎಂಬುದನ್ನೂ ಹೀಲಿ ಸ್ಪಷ್ಟಪಡಿಸಿದ್ದಾರೆ
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications