ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನೀರು ಹಂಚಿಕೆ: ಶನಿವಾರ ತಮಿಳುನಾಡು ಸರ್ವಪಕ್ಷ ಸಭೆ

By Staff
|
Google Oneindia Kannada News

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಗುರುವಾರ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳಲು ತಮಿಳುನಾಡು ಸರ್ಕಾರ ಸರ್ವ ಪಕ್ಷಗಳ ಸಭೆಯನ್ನು ಶನಿವಾರ ಕರೆದಿದೆ.

ಕರ್ನಾಟಕದಿಂದ ನೀರು ಬಿಡುಗಡೆಯ ಕುರಿತಂತೆ ಗುರುವಾರದ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲಾಗಲಿಲ್ಲ . ಇದರಿಂದಾಗಿ ರಾಜ್ಯದ ಮುಂದಿನ ಹೆಜ್ಜೆಯನ್ನು ಶನಿವಾರದ ಸರ್ವಪಕ್ಷ ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಂದಾಯ ಸಚಿವ ಎನ್‌.ದಳವಾಯಿ ಸುಂದರಂ ಹೇಳಿದರು.

ಪ್ರಸ್ತುತ ಮೆಟ್ಟೂರು ಜಲಾಶಯದಲ್ಲಿರುವ ನೀರಿನ ಸಂಗ್ರಹ ಇನ್ನು 9 ದಿನಗಳಿಗೆ ಮಾತ್ರ ಸಾಲುತ್ತದೆ. ಮಧ್ಯಂತರ ಆದೇಶದ ಪ್ರಕಾರ ಸೆಪ್ಟಂಬರ್‌ 6 ರ ಹೊತ್ತಿಗೆ ಕರ್ನಾಟಕ 113.93 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಿತ್ತು . ಆದರೆ, ಈವರೆಗೆ ಕರ್ನಾಟಕ ಬಿಡುಗಡೆ ಮಾಡಿರುವುದು 63.20 ಟಿಎಂಸಿ ನೀರು ಮಾತ್ರ ಎಂದು ಸುಂದರಂ ಹೇಳಿದರು.

3.9 ಲಕ್ಷ ಎಕರೆ ಪ್ರದೇಶದಲ್ಲಿರುವ ಕುರುವೈ ಬೆಳೆಗೆ ನೀರಿನ ಅಗತ್ಯವಿದ್ದು , ರಾಜ್ಯದ ರೈತರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಶನಿವಾರದ ಸರ್ವಪಕ್ಷ ಸಭೆ ಕರೆದಿರುವುದಾಗಿ ಸುಂದರಂ ತಿಳಿಸಿದರು.

(ಪಿಟಿಐ)

ವಾರ್ತಾ ಸಂಚಯ:
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X