Get Updates
Get notified of breaking news, exclusive insights, and must-see stories!

ಜನಮತ ಸಂವಿಧಾನದ ಸವಾರಿಗೆ ಅವಕಾಶ ಕಲ್ಪಿಸುವುದಿಲ್ಲ-ಸುಪ್ರಿಂಕೋರ್ಟ್‌

ನವದೆಹಲಿ : ಜನ ಪ್ರತಿನಿಧಿಗಳ ಅಧಿಕಾರ ವ್ಯಾಪ್ತಿಯ ಕುರಿತು ಸರ್ವೋಚ್ಛ ನ್ಯಾಯಾಲಯ ಗುರುವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು , ಸಂವಿಧಾನದ ಮೇಲೆ ಸವಾರಿ ಮಾಡಲು ಯಾವುದೇ ವ್ಯಕ್ತಿಗೆ ಜನಮತ ಅಧಿಕಾರ ಕಲ್ಪಿಸಿಕೊಡುವುದಿಲ್ಲ ಎಂದು ಹೇಳಿದೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಜೆ.ಜಯಲಲಿತಾ ಅವರು ನೇಮಕಗೊಂಡಿರುವ ಕುರಿತು ಪರ ವಿರೋಧ ವಾದಗಳನ್ನು ಆಲಿಸಿದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಇದಕ್ಕೂ ಮುನ್ನ ಜಯಲಲಿತಾ ಅವರ ವಕೀಲರಾದ ಕೆ.ಕೆ.ವೇಣುಗೋಪಾಲ್‌ ಅವರು ನ್ಯಾಯಪೀಠಕ್ಕೆ ಸಲ್ಲಿಸಿದ್ದ ತಮ್ಮ ಹೇಳಿಕೆಯಲ್ಲಿ - ‘ತಮಿಳುನಾಡಿನ ಜನತೆ ಎಐಎಡಿಎಂಕೆ ಪಕ್ಷಕ್ಕೆ ಬಹುಮತ ನೀಡಿದ್ದು , ಪಕ್ಷದ ನಾಯಕಿಯಾದ ಜಯಲಲಿತಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜಯಲಲಿತಾ ಅವರಿಗೆ ಶಾಸಕರ ಬೆಂಬಲ ಇರುವುದನ್ನು ಮನಗಂಡಿದ್ದರಿಂದಲೇ ರಾಜ್ಯಪಾಲೆ ಫಾತಿಮಾ ಬೀವಿ ಅವರು ಜಯಲಲಿತಾ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು’ ಎಂದು ತಿಳಿಸಿದ್ದರು.

ಜಯಲಲಿತಾ ಅವರನ್ನು ಆಹ್ವಾನಿಸುವ ಬದಲು ರಾಜ್ಯಪಾಲರು ಇತರ ಕ್ರಮಗಳ ಕುರಿತು ಯೋಚಿಸಿದ್ದಲ್ಲಿ ಅದು ಜನತೆಯ ಸೋಲಾಗುತ್ತಿತ್ತು ಎಂದೂ ವೇಣುಗೋಪಾಲ್‌ ವಾದಿಸಿದ್ದರು.

ಜಯಲಲಿತಾ ಪರ ವಾದವನ್ನು ಆಲಿಸಿದ ನ್ಯಾಯಪೀಠ ವೇಣುಗೋಪಾಲ್‌ ಅವರಿಗೆ ತಮ್ಮ ಮಾತುಗಳನ್ನು ಪುನಃ ಪರಿಶೀಲಿಸುವಂತೆ ಸೂಚಿಸಿತು. ನಾವು ಸಂವಿಧಾನದ ಪ್ರಕಾರ ನಡೆಯ್ತುತೇವೆ. ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯಾಬ್ಬರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸುವ ಕ್ರಮವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಐವರು ಸದಸ್ಯರ ನ್ಯಾಯಪೀಠ ಹೇಳಿದೆ.

‘ಜನತೆಯೇ ಸರ್ವೋಚ್ಛ’ ಎನ್ನುವ ವೇಣುಗೋಪಾಲ್‌ ಅವರ ಮಾತನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಭರೂಚ ಅವರು, ‘ಈ ಮಾತನ್ನು ನಾವೂ ಒಪ್ಪುತ್ತೇವೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಸಂವಿಧಾನವನ್ನು ಅನುಕೂಲಕ್ಕೆ ತಕ್ಕಂತೆ ತಿರುಚಲಾಗಿದೆ. ಜಯಲಲಿತಾ ಅವರು ತಮ್ಮ ಮೇಲಿನ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಕಾಯಬೇಕಿತ್ತು . ಇಲ್ಲಿ ನಾವಿರುವುದು ನಿಮ್ಮ ಹೇಳಿಕೆಗಳನ್ನು ಕೇಳಲೇ ಹೊರತು ಜನರದ್ದಲ್ಲ . ಈ ರೀತಿಯ ಧೋರಣೆಗಳು ಅಪಾಯಕಾರಿ’ ಎಂದು ಕಟುವಾಗಿ ನುಡಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+