ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬೇಡಿಕೆಗೆ ಶತಮಾನದ ಪ್ರಾಯ!
ಹುಬ್ಬಳ್ಳಿ : ಹುಬ್ಬಳ್ಳಿ ಅಂಕೋಲಾ ನಡುವೆ ರೈಲ್ವೇ ಮಾರ್ಗದ ಬೇಡಿಕೆಯನ್ನು ಉತ್ತರ ಕರ್ನಾಟಕದ ಜನತೆ ಸರಕಾರದ ಮುಂದಿಟ್ಟು ಶತಮಾನದಿಂದಲೂ ಕಾಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರೈಲು ಮಾರ್ಗಕ್ಕೆ ಕೆಸರು ಕಲ್ಲು ಹಾಕಿದ್ದರೂ ಈ ಕುರಿತು ಯಾವುದೇ ಪ್ರಗತಿಯಾಗಿಲ್ಲ ಎಂದು ದಕ್ಷಿಣ ಕೇಂದ್ರ ರೈಲ್ವೇಯ ವಿಭಾಗೀಯ ನಿರ್ವಹಣಾಧಿಕಾರಿ ದ್ವಾದಶ ಶ್ರೇಣಿ ತೀವ ವಿಷಾದ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶ್ರೇಣಿ ಅವರು, ಹುಬ್ಬಳ್ಳಿ - ಅಂಕೋಲಾ ಬ್ರಾಡ್ ಗೇಜ್ ರೈಲುಮಾರ್ಗದ ಕಾಮಗಾರಿ ಹಾಗೂ ಗದಗ್ ಬಿಜಾಪುರ ಗೇಜ್ ಪರಿವರ್ತನೆಯ ಕೆಲಸ ಇನ್ನೂ ಬಾಕಿ ಉಳಿದಿದೆ. ಇದಕ್ಕಾಗಿ ರಾಜ್ಯ ಸರಕಾರದಿಂದ ಕಾಮಗಾರಿ ವೆಚ್ಚದ ಶೇ 50 ರಷ್ಟು ಪಾಲಿನ ಹಣ ಬಿಡುಗಡೆಯಾಗಬೇಕಿದೆ ಎಂದರು.
ಶ್ರೇಣಿ ಅವರು ಜಿಲ್ಲೆಯ ಇಂಟರ್ಯಾಕ್ಟಿವ್ ವಾಯ್ಸ್ ರೆಸೊನೆನ್ಸ್ ಸಿಸ್ಟಂ(ವಿಆರ್ಎಸ್)ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಆರ್ಎಸ್ ರಿಸರ್ವೇಶನ್, ರೈಲು ಆಗಮನ ಮತ್ತು ನಿರ್ಗಮನದ ಬಗೆಗೆ ಮಾಹಿತಿ ನೀಡುತ್ತದೆ. ಈ ಪದ್ಧತಿಯನ್ನು ಹೊಸಪೇಟೆ, ವಾಸ್ಕೋ, ಮೀರಜ್ ಮತ್ತು ಕೊಲ್ಲಾಪುರ ರೈಲ್ವೇ ಸ್ಟೇಷನ್ಗಳಲ್ಲಿಯೂ ಅಳವಡಿಸಲಾಗುವುದು ಎಂದು ಶ್ರೇಣಿ ಹೇಳಿದರು.
(ಪಿಟಿಐ)