ಹೆಬ್ಬಾಳ ಕೆರೆ ಮೇಲು ಸೇತುವೆಗೆಶಂಕುಸ್ಥಾಪನೆ, ಕಾಮಗಾರಿಗೆ ಚಾಲನೆ
ಬೆಂಗಳೂರು : ಹೆಬ್ಬಾಳ ಕೆರೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಮೇಲು ಸೇತುವೆಗೆ ಮುಖ್ಯಮಂತ್ರಿ ಕೃಷ್ಣ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ಅಧಿಕಾರಿಗಳು ವಿಳಂಬನೀತಿಯನ್ನು ಕೈಬಿಟ್ಟು, ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಏಳು, ಹೊರ ರಿಂಗ್ ರಸ್ತೆ ಹಾಗೂ ಹೆಬ್ಬಾಳ ಸರೋವರಗಳ ವ್ಯಾಪ್ತಿಯಲ್ಲಿ ವಾಹನ ಸಂಚಾರದ ಒತ್ತಡವನ್ನು ಈ ಮೇಲ್ಸೇತುವೆ ಕಡಿಮೆ ಮಾಡಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ನಿಗಮ ಹಾಗೂ ರೈಲ್ವೆ ಇಲಾಖೆಯ ಸಹಯೋಗದಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿದೆ.
43 ಕೋಟಿ ರುಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೇತುವೆಯ ಕಾಮಗಾರಿ 18 ತಿಂಗಳೊಳಗೆ ಪೂರ್ಣವಾಗಲಿದೆ. ಗ್ಯಾಮನ್ ಇಂಡಿಯಾ ಕಂಪನಿಗೆ ಈ ಕಾಮಗಾರಿಯನ್ನು ವಹಿಸಿಕೊಡಲಾಗಿದೆ ಎಂದು ಅವರು ಹೇಳಿದರು. ಬೆಂಗಳೂರಿನ ಸಂಚಾರಿ ಒತ್ತಡ ನಿಭಾಯಿಸಲು ಮತ್ತಷ್ಟು ಫೈಓವರ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ವಿಧಾನ ಸಭಾ ಸದಸ್ಯ ಬಿ. ಪ್ರಸನ್ನಕುಮಾರ್, ಸಚಿವರಾದ ಎ. ಕೃಷ್ಣಪ್ಪ, ರೋಷನ್ ಬೇಗ್ ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ. ಜಾಫರ್ ಷರೀಫ್, ಬೆಂಗಳೂರು ಮೇಯರ್ ಪ್ರೇಮಾ ಕಾರಿಯಪ್ಪ, ಮೊದಲಾದವರು ಪಾಲ್ಗೊಂಡಿದ್ದರು.
ವಾರ್ತಾ
ಸಂಚಯ:
ಮುಖಪುಟ
/
ಇವತ್ತು...
ಈ
ಹೊತ್ತು...