ಈ ಬಾರಿಯ ಬೇಸಗೆಯ ಧಗೆ ಅಸಹನೀಯವಾಗಿರುತ್ತದೆಯೇ?
ಬಹಳಷ್ಟು ಜನ ಹೌದೆನ್ನುತ್ತಿದ್ದಾರೆ. ಮಳೆ ಮರೀಚಿಕೆಯಾಗಿ ರಾಜ್ಯದೆಲ್ಲೆಡೆ ಬರದ ಕರಾಳ ಛಾಯೆ ಕವಿದಿರುವಾಗ ಇಂಥ ಅನ್ನಿಸಿಕೆ ಸಹಜವೇ! ಋತುಮಾನದ ಹಂಗಿಲ್ಲದೆ ನಿತ್ಯ ಹರಿದ್ವರ್ಣದಂತಿದ್ದ ಬೆಂಗಳೂರಿನಂಥ ಬೆಂಗಳೂರೇ ಮುಂಗಾರಿನ ದಿನಗಳಲ್ಲೇ ಬಾಯ್ಬಿಟ್ಟು ಕೂತಿರುವಾಗ, ಬೇಸಗೆ ಸಹನೀಯವಾಗಿರುತ್ತದೆಂದು ಯಾವ ಬಾಯಲ್ಲಿ ಹೇಳುವುದು!? ಆದರೆ ಆ ಧೈರ್ಯವನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಪ್ರದರ್ಶಿಸಿದೆ. ಈ ಸಲದ ಬೇಸಗೆ ನೀವು ಅಂಜುವಷ್ಟು ಅಧ್ವಾನವಾಗೇನೂ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಬರುವ ಮೇ, ಜೂನ್ ತಿಂಗಳಲ್ಲಿ ಮುಂಬಯಿ ಹೊರತಾಗಿ ಉಳಿದ ನಗರಗಳ ತಾಪಮಾನದಲ್ಲಿ ಅಂಥ ಏರಿಕೆಯೇನೂ ಕಂಡುಬರುವುದಿಲ್ಲ ಎನ್ನುತ್ತದೆ ಇಲಾಖೆ. ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ನಡೆಸಿರುವ ವಾತಾವರಣದ ಅಧ್ಯಯನವೇ ಈ ಹೇಳಿಕೆಗೆ ಮೂಲ.
1969 ರಿಂದ ಈವರೆಗಿನ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳ ದಿನನಿತ್ಯದ ಕನಿಷ್ಠ- ಗರಿಷ್ಠ ಉಷ್ಣಾಂಶಗಳು ಹಾಗೂ ವಾತಾವರಣದ ಏರಿಳಿತಗಳನ್ನು ಹವಾಮಾನ ಇಲಾಖೆಯ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಈ ಅಂಕಿ ಅಂಶಗಳನ್ನು ಬಳಸಿಕೊಂಡು ಹವಾಮಾನದ ಟ್ರೆಂಡ್ ಬಗೆಗಿನ ವರದಿಯನ್ನು ಎ.ಕೆ.ಶ್ರೀವಾಸ್ತವ, ಕೆ.ಸಿ. ಸಿನ್ಹ ರೇ ಹಾಗೂ ಆರ್.ವಿ.ಯಾದವ್ ಸಿದ್ಧಪಡಿಸಿದ್ದಾರೆ. ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ನ ಪ್ರಕಟಣೆ ‘ಕರಂಟ್ ಸೈನ್ಸ್’ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ.
ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಮೇ ತಿಂಗಳಲ್ಲಿ - ಐದು ದಿನಗಳ ಅವಧಿಯ ಪೆಂಟಾಡ್ ಮಾನದಂಡದ ಪ್ರಕಾರ ಉಷ್ಣಾಂಶ ತುಸು ಏರುಮುಖದಲ್ಲಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಆದರೆ, ದೆಹಲಿ, ಕೋಲ್ಕತಾ, ಚೆನ್ನೈ ನಗರಿಗಳಲ್ಲಿ ಕಳೆದ 30 ವರ್ಷಗಳಲ್ಲಿ ಉಷ್ಣಾಂಶದ ಪ್ರಮಾಣ ಸಮತೋಲನದಲ್ಲಿರುವುದಾಗಿ ಅಧ್ಯಯನ ತಿಳಿಸಿದೆ. ವಿವಿಧ ಕಾರಣಗಳಿಂದಾಗಿ ಮಹಾನಗರಗಳು ಬಿಸಿ ದ್ವೀಪಗಳಾಗುತ್ತಿರುವ ಬಗೆಗೆ ವರದಿ ಆತಂಕ ವ್ಯಕ್ತಪಡಿಸಿದೆ.
ಸೆಪ್ಟಂಬರ್ ನಡುವರೆಗೆ ಬೆಂಗಳೂರಿನಲ್ಲಿ ಬಿಸಿಲಿನದೇ ಹಾಡು!
ದಕ್ಷಿಣ ಭಾರತದಲ್ಲಿ ದುರ್ಬಲಗೊಂಡಿರುವ ಮುಂಗಾರಿನ ಕಳೆಗುಂದಿದ ಛಾಯೆ ಕಳೆದ ಹದಿನೈದು ದಿನಗಳಿಂದ ಬೆಂಗಳೂರಿನಲ್ಲೂ ಪ್ರತಿಬಿಂಬಿಸಿದ್ದು , ಸೆಪ್ಟಂಬರ್ ಮಧ್ಯಭಾಗದವರೆಗೂ ಇದೇ ಪರಿಸ್ಥಿತಿ ಮುಂದುವರಿಯುವುದು ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಆನಂದ್ ಎಲ್ ಕೊಪ್ಪಾರ್ ತಿಳಿಸಿದ್ದಾರೆ.
ಉ.ಪ್ರ.ದಲ್ಲಿ ಧಾರಾಕರ ಮಳೆಗೆ 141 ಸಾವು
ಕಳೆದ ನಾಲ್ಕು ದಿನಗಳಿಂದ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಗೆ ಈವರೆಗೆ ಸುಮಾರು 141 ಮಂದಿ ಬಲಿಯಾಗಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು , 1 ಸಾವಿರ ಹಳ್ಳಿಗಳಲ್ಲಿನ 60 ಸಾವಿರ ಹೆಕ್ಟೇರ್ ಕೃಷಿಭೂಮಿಗೆ ಹಾನಿಯಾಗಿದೆ. 4 ಲಕ್ಷ ಮಂದಿ ಮಳೆಯಿಂದ ತೊಂದರೆ ಅನುಭವಿಸಿದ್ದು , 1 ಸಾವಿರ ಮನೆಗಳು ಪೂರ್ಣ ಅಥವಾ ಅರೆ ಜಲಾವೃತವಾಗಿವೆ. ಈ ನಡುವೆ ಪರಿಹಾರ ಕಾಮಗಾರಿಗಳೂ ತ್ವರಿತ ಗತಿಯಿಂದ ಸಾಗಿವೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications