ಸೆ.10 : ಬರ ಪರಿಸ್ಥಿತಿ ವೀಕ್ಷಿಸಲು ಜಮಖಂಡಿಗೆ ಸೋನಿಯಾ ಭೇಟಿ
ಬೆಂಗಳೂರು: ಕಾಂಗ್ರೆಸ್ ಪಕ್ಧ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸೆಪ್ಟಂಬರ್ 10 ರಂದು ಜಮಖಂಡಿಗೆ ಭೇಟಿ ನೀಡಲಿದ್ದು , ರಾಜ್ಯದಲ್ಲಿ ನ ಬರ ಪರಿಸ್ಥಿತಿಯನ್ನು ಅವರು ಖುದ್ದಾಗಿ ವೀಕ್ಷಿಸುವರು ಎಂದು ಕಂದಾಯ ಸಚಿವ ಶ್ರೀಕಂಠಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ನಿಭಾಯಿಸಲು ಇನ್ನೂ 20 ಕೋಟಿ ರುಪಾಯಿಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು. ಕೇಂದ್ರದ ನೆರವು ಸೇರಿದಂತೆ ಈಗಾಗಲೇ 70 ಕೋಟಿ ರುಪಾಯಿಗಳನ್ನು ಬರ ಪರಿಹಾರ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ಶ್ರೀಕಂಠಯ್ಯ ತಿಳಿಸಿದರು.
ಕುಡಿಯುವ ನೀರು ಪೂರೈಕೆಗಾಗಿ ರಾಜ್ಯ ಸರ್ಕಾರ ಅಗತ್ಯ ಪ್ರಮಾಣದ ಹಣ ಬಿಡುಗಡೆ ಮಾಡಿದ್ದು , ರಾಜ್ಯದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಲ್ಲಿ ತಕ್ಷಣ ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಜಮಖಂಡಿ
ಎನ್ನುತ್ತಿದ್ದಂತೆ-
ಜಮಖಂಡಿ
ಪ್ರದೇಶದಲ್ಲಿ
ಜನಪ್ರಿಯವಾಗಿರುವ
ಜನಪದ
ಗೀತೆಯಾಂದು
ನೆನಪಿಗೆ
ಬರುತ್ತದೆ.
ಅಂಥ
ಒಂದು
ಗೀತೆಯ
ತುಣುಕು
ಓದಿರಿ
;
ಜಾನಿ
ಜವಾನಿ
ಚಲೋ
ಜಮಖಂಡಿ
ನೀ
ಹಂಗ್ಯಾಕ
ಹವ್ವಹಾರಿ
ನಿಂತಕಂಡಿ
ನಿನ್ನಷ್ಟಿಗೆ
ನೀನೇನೋ
ತಿಳಕಂಡಿ
ನಿನಗೆ
ತಿನ್ನಾಕೆ
ತಂದೀನಿ
ಬಾರ
ಅಂಟಿನ
ಉಂಡಿ
(ಇನ್ಫೋ ವಾರ್ತೆ)