ಸೆ. 5ರಂದು ಕಲಾಕ್ಷೇತ್ರದಲ್ಲಿ ರಾಜ್ಯ ನಾಟಕ ಅಕಾಡೆಮಿ ಬೆಳ್ಳಿಹಬ್ಬ
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯ ಬೆಳ್ಳಿಹಬ್ಬದ ಆಚರಣೆ ಸೆಪ್ಟೆಂಬರ್ 5ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾಸ್ಟರ್ ಹಿರಣ್ಣಯ್ಯ, ಜಿ.ವಿ.ಅಯ್ಯರ್ ಸೇರಿದಂತೆ ರಂಗ ಕ್ಷೇತ್ರದ ದಿಗ್ಗಜರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯ ನಾಟಕ ಅಕಾಡೆಮಿಗೆ ಹೊಸ ರೂಪು ಕೊಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳು ಕಣ್ಣಮುಂದಿವೆ. ಅಕಾಡೆಮಿ 25 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ನಿರ್ದಿಷ್ಟ ವಸ್ತುವಿನ ಸುತ್ತ ಹೆಣೆಯಲಾದ ನಾಟಕಗಳ ಪ್ರದರ್ಶನ ನಡೆಸುವುದು, ಒಂದು ವಿಷಯವನ್ನು ಗೊತ್ತುಪಡಿಸಿ, ಅದರ ಬಗ್ಗೆ ಚರ್ಚಿಸುವುದು ಇಂಥಾ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಆರ್.ನಾಗೇಶ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ರಂಗ ಕ್ಷೇತ್ರದ ಎಲ್ಲಾ ಚಟುವಟಿಕೆಗಳಲ್ಲಿ ಭೂಮಿ ಸತ್ಯ ಮತ್ತು ಭೂಮಿ ಸತ್ವಕ್ಕೆ ಒತ್ತು ಕೊಡಬೇಕು. ರಂಗ ಕ್ಷೇತ್ರದಲ್ಲಷ್ಟೇ ಭೂಮಿ ಎಂಬ ಪದ ಆಚರಣೆಯಲ್ಲಿರುವುದು ಎಂದು ನಾಗೇಶ್ ಹೇಳಿದರು.
(ಇನ್ಫೋ ವಾರ್ತೆ)