ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಳೆದ 8 ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ 24 ಆತ್ಮಹತ್ಯೆ !
ಹುಬ್ಬಳ್ಳಿ : ಮಾಡಿದ ಸಾಲ ತೀರಿಸಲಾಗದೆ ಧಾರವಾಡ ಜಿಲ್ಲೆಯ ಹಳ್ಳಿಗೇರಿಯ 24 ವರ್ಷದ ರೈತನೊಬ್ಬ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳ ಅವಧಿಯಲ್ಲಿ 24ನೇ ಆತ್ಮಹತ್ಯೆ ಇದು.
ಬೇಸಾಯಕ್ಕಾಗಿ ಸುಮಾರು ಮೂರೂವರೆ ಲಕ್ಷ ರುಪಾಯಿಯಷ್ಟು ಸಾಲ ಮಾಡಿದ್ದ ಭರ್ಮಪ್ಪ ಕೊಟ್ರಪ್ಪ ನಾಯಕ ಮಳೆ ಇಲ್ಲದೆ ಬೆಳೆ ಹಾಳಾದದ್ದು , ಹಾಗೂ ಬೆಳೆಯ ಬೆಂಬಲ ಬೆಲೆ ಕುಸಿದ ಕಾರಣ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನವಲಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
(ಏಜೆನ್ಸೀಸ್)
Comments
Story first published: Monday, September 3, 2001, 5:30 [IST]