ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಾ. ರಾಜ್ಕುಮಾರ್ ಅಪಹರಣದಪ್ರಮುಖ ಆರೋಪಿ ಬಂಧನ
ಚಾಮರಾಜನಗರ : ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಟಿ.ಎನ್.ಎಲ್.ಎ. ಸದಸ್ಯ ಪರಂಜ್ಯೋತಿ ಎಂಬುವವನನ್ನು ತಂಜಾವೂರಿನಲ್ಲಿ ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
28 ವರ್ಷ ವಯಸ್ಸಿನ ಪರಂಜ್ಯೋತಿ ಅಲಿಯಾಸ್ ಏಳುಮಲೈ ರಾಜ್ಕುಮಾರ್ ಅವರನ್ನು ಅಪಹರಿಸಲು ವೀರಪ್ಪನ್ಗೆ ಎಲ್ಲ ಮಾಹಿತಿ ಒದಗಿಸಿದ್ದ ಎನ್ನಲಾಗಿದೆ. ಡಾ. ರಾಜ್ಕುಮಾರ್ ಗಾಜನೂರಿಗೆ ಬರುವ ವಿಷಯ, ಅವರೊಂದಿಗೆ ಎಷ್ಟು ಜನ ಇದ್ದಾರೆ. ಭದ್ರತೆ ಎಷ್ಟಿದೆ, ಅವರ ಕಾರ್ಯಕ್ರಮಗಳೇನು ಎಂಬ ಎಲ್ಲ ಮಾಹಿತಿ ಸಂಗ್ರಹಿಸಿ, ವೀರಪ್ಪನ್ಗೆ ಮುಟ್ಟಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಹೊತ್ತು ಅರಣ್ಯದಲ್ಲಿ ತಲೆಮರೆಸಿಕೊಂಡಿರುವ ವೀರಪ್ಪನ್ ಚಲನವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಪರಂಜ್ಯೋತಿಯ ಬಂಧನದಿಂದ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಸಾಕಷ್ಟು ಮಾಹಿತಿಗಳು ದೊರಕಬಹುದು ಎಂದು ನಿರೀಕ್ಷಿಸಲಾಗಿದೆ.
Comments
Story first published: Monday, September 3, 2001, 5:30 [IST]