‘2002- ತಾಂತ್ರಿಕ ಕ್ಷೇತ್ರಕ್ಕೆ ಶುಕ್ರದೆಶೆ, ಬಂದೇ ಬರತಾವ ಕಾಲ’
ಅಮೆರಿಕ ಆರ್ಥಿಕ ಹಿಂಜರಿಕೆಯಿಂದ ಲಯ ತಪ್ಪಿದ್ದ ತಾಂತ್ರಿಕ ಕ್ಷೇತ್ರದ ಪೆಂಡ್ಯೂಲಮ್ ಆವರ್ತನೆ ಬರುವ ವರ್ಷದ ಮಧ್ಯದ ಹೊತ್ತಿಗೆ ಯಥಾ ಸ್ಥಿತಿಗೆ ಮರಳಲಿದೆ. ಅಮೆರಿಕಾ ಟೆಲಿ ಕಮ್ಯುನಿಕೇಷನ್ಸ್ ದಿಗ್ಗಜ ಸಂಸ್ಥೆ ‘ಆಲ್ಕೇಟೆಲ್’ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಕಂಪನಿಯ ಅಧ್ಯಕ್ಷರ ಮುಖ್ಯ ಸಲಹೆಗಾರ, ಮೇಲಾಗಿ ಕರ್ನಾಟಕದಲ್ಲಿ ಹುಟ್ಟಿದ ಕ್ರಿಷ್ ಅನಂತ್ ಪ್ರಭು ಈ ಮಾತನ್ನು ಹೇಳಿದ್ದಾರೆ.
ಪ್ರಭು ಮಾತಿನ ಸಾರ ಇಂತಿದೆ....
- ತಾಂತ್ರಿಕ ಕ್ಷೇತ್ರದ ಇಳಿಮುಖ- ಏರುಮುಖ ಒಂದು ಚಕ್ರದ ಚಲನೆಯಂತೆ. ಕಳೆದ 20 ವರ್ಷಗಳಲ್ಲಿ ಹಲವಾರು ಬಾರಿ ಹಿಂಜರಿಕೆಯಾಗಿದೆ. ಆದರೆ ಪ್ರಸ್ತುತ ಹಿಂಜರಿಕೆಯ ಪ್ರಮಾಣ ಕೊಂಚ ಜಾಸ್ತಿಯಿರುವುದರಿಂದ ಆತಂಕ ಹೆಚ್ಚಿದೆ.
- ಮುಂದಿನ ವರ್ಷ (2002) ಬಂದೇ ಬರತಾವ ಕಾಲ.
- ಇಂಟರ್ನೆಟ್ ವಿತ್ತ ವ್ಯವಸ್ಥೆಯಲ್ಲಿ ಏರುಮುಖವಾಗಲಿದ್ದು, ಸೇವಾ ಕ್ಷೇತ್ರದ ಉದ್ಯೋಗಾವಕಾಶ ಕಂಡಾಪಟ್ಟೆ ಏರಲಿದೆ. ಉತ್ಪನ್ನವೂ ಸಂತೃಪ್ತ ಸ್ಥಿತಿ ಮುಟ್ಟಲಿದೆ.
ಭೌತಶಾಸ್ತ್ರ ವಿಷಯದಲ್ಲಿ ಐಐಟಿ ಬಾಂಬೆಯ ಸ್ನಾತಕೋತ್ತರ ಪದವಿ ಪಡೆದ ಪ್ರಿಷ್ ಪ್ರಭು ಅಮೆರಿಕೆಗೆ ಹಾರಿದ್ದು 1975ರಲ್ಲಿ. ಇಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ಒಂದು ಸ್ನಾತಕೋತ್ತರ ಹಾಗೂ ಡಾಕ್ಟೊರಲ್ ಪದವಿಯನ್ನು ಬುಟ್ಟಿಗೆ ಹಾಕಿಕೊಂಡರು. ಬೆಲ್ ಲ್ಯಾಬ್ಸ್ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಪ್ರಭು, ಎಟಿ ಅಂಡ್ ಟಿ ಕಾರ್ಪೊರೇಷನ್ ಹಾಗೂ ಲ್ಯೂಸೆಂಟ್ ಟೆಕ್ನಾಲಜೀಸ್ನಲ್ಲೂ ಹೆಸರು ಮಾಡಿದರು. ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿದ ನಂತರ ಉತ್ಪನ್ನ ವಿಭಾಗಕ್ಕೆ ವರ್ಗಾವಣೆ.
ಡಲ್ಲಾಸ್ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಟೆಲಿಕಮ್ಯುನಿಕೇಷನ್ ವಿಷಯದಲ್ಲಿ ಹೆಚ್ಚುವರಿ ಪ್ರೊಫೆಸರ್ ಆಗಿ ಪ್ರಭು ಪಾಠ ಕೂಡ ಹೇಳಿದ್ದಾರೆ. ಪ್ರಸ್ತುತ ಅಲ್ಕೇಟೆಲ್ನಲ್ಲಿ ವ್ಯಾಪಾರ ವೃದ್ಧಿಸಿರುವ ಅಗ್ಗಳಿಕೆ ಇವರದ್ದು. ಅಮೆರಿಕಾ ಮೂಲದ ಐಐಟಿ ಅಲ್ಯುಮಿನಿ, ಮುಂಬಯಿ- ಇಲ್ಲಿ ಸಾಕಷ್ಟು ನಿಧಿ ಸಂಗ್ರಹಿಸಿ ವಿದ್ಯಾರ್ಥಿ ವೇತನ ದತ್ತಿಯನ್ನೂ ಪ್ರಭು ಸ್ಥಾಪಿಸಿದ್ದಾರೆ. ಮೈಸೂರಿನ ಬಡ ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರುಪಾಯಿ ಸಹಾಯವನ್ನು ಈ ದತ್ತಿ ಮಾಡುತ್ತಿದೆ.
ಸಾಧನೆಯ ಹಾದಿಯಲ್ಲಿ ಸಾಕಷ್ಟು ಮೈಲುಗಲ್ಲು ನೆಟ್ಟಿರುವ ಪ್ರಭು ಗುರಿ ಗಗನ ಕುಸುಮದತ್ತ. ಅಮೆರಿಕೆಯಲ್ಲಷ್ಟೇ ಅಲ್ಲದೆ ದಕ್ಷಿಣ ಏಷ್ಯಾದಲ್ಲೂ ಸಾಕಷ್ಟು ಉದ್ಯೋಗ ಸೃಷ್ಟಿಸುವಂಥಾ ಆರ್ಥಿಕ ಸ್ಥಿತಿ ನಿರ್ಮಿಸಬಹುದು ಎನ್ನುವ ಪ್ರಭು ಕಣ್ಣಲ್ಲಿ ಒಬ್ಬ ಅರ್ಥಶಾಸ್ತ್ರಜ್ಞನೂ ಕುಳಿತಿದ್ದಾನೆ. ತಂತ್ರಜ್ಞಾನಿಗಳಿಗೆ ಕೆಟ್ಟ ಕಾಲ ಇದ್ದರೂ, ಇಲ್ಲ ಎನ್ನುವುದೇ ಕಠೋರ ಸತ್ಯ ಎನ್ನುವ ಪ್ರಭು ಸಣ್ಣಗೆ ನಗುವಾಗ ಕಣ್ಣು ಹೊಳೆಯುತ್ತದೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications