ಅ.31ರಂದು ಬೆಂಗಳೂರಲ್ಲೂ ನಡೆಯಲಿದೆ‘ಅಕ್ಟೋಬರ್ ಫೆಸ್ಟ್’
ಬೆಂಗಳೂರು : ಕಳೆದೆರಡು ಶತಮಾನಗಳಿಂದ ಮ್ಯೂನಿಚ್ನಲ್ಲಿ ಪ್ರತಿವರ್ಷ ನಡೆಯುವ ಜರ್ಮನ್ ಅಕ್ಟೋಬರ್ ಫೆಸ್ಟ್ ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಈ ಉತ್ಸವ ದೇಶ ವಿದೇಶಗಳ ಸುಮಾರು 6 ಮಿಲಿಯನ್ ಜನರನ್ನು ಆಕರ್ಷಿಸಿದೆ ಎಂದರೆ ಇದರ ಜನಪ್ರಿಯತೆ ತಿಳಿದೀತು. ಈಗ ಇದೇ ಮಾದರಿಯ ಉತ್ಸವ ಬೆಂಗಳೂರಿನಲ್ಲೂ ನಡೆಯುತ್ತಿದೆ.
ಮೊಟ್ಟ ಮೊದಲ ಬಾರಿಗೆ ಭಾರತದ ಸಿಲಿಕಾನ್ ಕಣಿವೆಗೆ ಕಾಲಿಟ್ಟಿರುವ ಈ ಉತ್ಸವ ಅಕ್ಟೋಬರ್ 31ರಂದು ಜರುಗಲಿದೆ. ಜರ್ಮನಿಯಲ್ಲಿ ಅಕ್ಟೋಬರ್ ಫೆಸ್ಟ್ ಫ್ರುಹ್ಶೊಪೆನ್ ಎಂದೇ ಖ್ಯಾತಿ. ಇಂತಹ ಉತ್ಸವವನ್ನು ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಕಳೆದ ವರ್ಷ ಬವೇರಿಯನ್ ಸ್ಟೇಟ್ ಮಿನಿಸ್ಟರ್ ಎರ್ವಿನ್ ಹುಬೆರ್ ಅವರೊಂದಿಗೆ ನಡೆದಿದ್ದ ಮಾತುಕತೆಯ ಫಲಶ್ರುತಿಯ ಪರಿಣಾಮವಾಗಿ ಈ ಉತ್ಸವ ನಡೆಯುತ್ತಿದೆ.
ಈ ಉತ್ಸವವನ್ನು ಬೆಂಗಳೂರಲ್ಲಿ ನಡೆಸಲು ಇಂಡೋ ಜರ್ಮನ್ ಕಲ್ಚರಲ್ ಸೊಸೈಟಿ, ಬೆಂಗಳೂರಿನಲ್ಲಿರುವ ಹಲವು ಜರ್ಮನ್ ಮೂಲದ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚಿಸಿ ರೂಪು-ರೇಷೆ ಸಿದ್ಧಪಡಿಸಿತು. ಈ ಎರಡು ದೇಶಗಳ ಜನರ ನಡುವೆ ಸಾಂಸ್ಕೃತಿಕ ಸಂಬಂಧ ಬೆಸೆಯುವುದೇ ಉತ್ಸವದ ಉದ್ದೇಶವಾಗಿದೆ ಎಂಬುದು ಸೊಸೈಟಿ ಹೇಳಿಕೆ.
ಪ್ರತಿವರ್ಷವೂ ಬೆಂಗಳೂರಿನಲ್ಲಿ ಅಕ್ಟೋಬರ್ ಫೆಸ್ಟ್ ಆಚರಿಸುವ ಯೋಜನೆ ಸೊಸೈಟಿಗಿದೆ. 2001ರ ಅಕ್ಟೋಬರ್ 31ರಂದು ಸಂಜೆ 6 ಗಂಟೆಗೆ ಸಮಾರಂಭ ನಗರದ ತಾಜ್ ರೆಸಿಡೆನ್ಸಿಯಲ್ಲಿ ನಡೆಯಲಿದೆ. ನವೆಂಬರ್ 1ರಂದು ಫ್ರುಹ್ಶೊಪೆನ್ ಮಾದರಿ ಉತ್ಸವ ಜರುಗಲಿದೆ.
ಈ ಉತ್ಸವದಲ್ಲಿ ಜರ್ಮನ್ ಸೊಗಡಿನ ಆಹಾರ ಸರಬರಾಜು ಮಾಡಲಾಗುತ್ತದೆ. ಜರ್ಮನ್ ಸಾಸೆಜ್, ಎಲೆಕೋಸಿನ ವಿವಿಧ ಆಹಾರಗಳು, ಆಲೂಗಡ್ಡೆ ಸಲಾಡ್ ಮೊದಲಾದವು ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಭಾರತದಲ್ಲಿ ನಡೆಯುತ್ತಿರುವ ಪ್ರಪ್ರಥಮ ಉತ್ಸವ ಇದಾಗಿದೆ. ಕೊರೆಯುವ ಚಳಿಯಲ್ಲಿ ಬಿಸಿಬಿಸಿ ಜರ್ಮನ್ ಖಾದ್ಯ ತಿನ್ನ ಬಯಸುವ ಸಸ್ಯಹಾರಿಗಳಿಗೆ ವಿಶೇಷ ಆಹಾರಗಳ ದೊಡ್ಡ ಪಟ್ಟಿಯೇ ಇದೆ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications