Get Updates
Get notified of breaking news, exclusive insights, and must-see stories!

ಉದ್ಯಾನ ನಗರಿಯ ಖ್ಯಾತಿ ಉಳಿಸಲುಮುಖ್ಯಮಂತ್ರಿ ಕೃಷ್ಣ ಸಂಕಲ್ಪ

ನವದೆಹಲಿ : ರಾಜ್ಯದ ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿ ಕೇಂದ್ರ ಕಾರಾಗೃಹ ಇರುವುದು ನಿಮಗೂ ಗೊತ್ತಲ್ಲ. ಮಹಾರಾಣಿ ಮಹಿಳಾ ಕಾಲೇಜಿನ ಎದುರೇ ಇರುವ ಈ ಕೇಂದ್ರ ಕಾರಾಗೃಹ ಈಗ ನಗರದ ಹೊರವಲಯಕ್ಕೆ ಸ್ಥಳಾಂತರಗೊಂಡಿದೆ.

ತೆರವಾಗಿರುವ ಈ ಪ್ರದೇಶದಲ್ಲಿ ಸುಂದರವಾದ ಮಕ್ಕಳ ಉದ್ಯಾನ ನಿರ್ಮಾಣ ಮಾಡಲು ರಾಜ್ಯ ಸರಕಾರ ಯೋಜಿಸಿದೆ. ಈಗಿನ ಸರಕಾರವಾಗಲೀ, ಮುಂದೆ ಬರುವ ಸರಕಾರಗಳೇ ಆಗಲಿ ರಾಜಧಾನಿಯ ಕೇಂದ್ರಭಾಗದಲ್ಲಿರುವ ಈ ಜಾಗದಲ್ಲಿ ಕಟ್ಟಡ ನಿರ್ಮಿಸದಂತೆ ನೋಡಿಕೊಳ್ಳಲು ಕೃಷ್ಣ ಕಂಕಣಬದ್ಧರಾಗಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಆಸ್ಪದ ನೀಡದಿರಲು ವಿಧೇಯಕವೊಂದನ್ನು ತರಲೂ ಅವರು ನಿರ್ಧರಿಸಿದ್ದಾರೆ. ಶನಿವಾರ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು ತಮ್ಮ ಮನದಾಳದ ಈ ಇಂಗಿತವನ್ನು ಹೊರಹಾಕಿದರು. ಈ ವಿಶಾಲ ಪ್ರದೇಶದಲ್ಲಿ ಸುಂದರ ಮಕ್ಕಳ ಉದ್ಯಾನ ನಿರ್ಮಿಸಲಾಗುವುದೆಂದೂ ತಿಳಿಸಿದರು. ಈ ಜಾಗದಲ್ಲಿ ಸರಕಾರಿ ವಸತಿ ಸಮುಚ್ಚಯ ನಿರ್ಮಿಸಬೇಕೆಂಬ ಒತ್ತಡವೂ ಬಂದಿತ್ತೆಂಬುದನ್ನು ಸ್ಮರಿಸಿದ ಅವರು, ಆದರೆ, ಸರಕಾರ ಇಲ್ಲಿ ಹಸಿರು ಉಸಿರಾಗಿರಬೇಕು ಎಂದು ನಿರ್ಧರಿಸಿದೆ ಎಂದರು.

ರೇಸ್‌ಕೋರ್ಸ್‌: ರೇಸ್‌ಕೋರ್ಸ್‌ ಅನ್ನು ಕೂಡ ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಈ ವಿಶಾಲ ಪ್ರದೇಶದಲ್ಲಿ ಕೂಡ ಯಾವುದೇ ಕಟ್ಟಡ ತಲೆ ಎತ್ತದಂತೆ ನೋಡಿಕೊಳ್ಳಲಾಗುವುದು. ಉದ್ಯಾನ ನಗರಿ ಎಂದು ಹೆಸರು ಪಡೆದಿರುವ ಬೆಂಗಳೂರಿನ ಖ್ಯಾತಿ ಉಳಿಸಲು ಇಲ್ಲೂ ಒಂದು ಉದ್ಯಾನ ನಿರ್ಮಿಸಲು ತಾವು ಬಯಸಿರುವುದಾಗಿ ಕೃಷ್ಣ ಹೇಳಿದರು.

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+