ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಬ್ಬಳಿಯಲ್ಲಿ ಗಣೇಶ ವಿಸರ್ಜನೆವೇಳೆ ಇರಿತಕ್ಕೆ ಯುವಕನ ಬಲಿ
ಹುಬ್ಬಳ್ಳಿ : ನಗರದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಹೊಡೆದಾಟದಲ್ಲಿ ಒಬ್ಬ ಯುವಕ ಚೂರಿ ಇರಿತಕ್ಕೆ ಬಲಿಯಾದ ಘಟನೆ ಭಾನುವಾರ ಸಂಭವಿಸಿದೆ.
ಮಧ್ಯರಾತ್ರಿವೇಳೆಗೆ ದಾಜಿಬಾನ್ ಪೇಟೆಯ ಸಿಟಿ ಕ್ಲಿನಿಕ್ ಬಳಿ ಗಣೇಶ ಮೆರವಣಿಗೆ ಬಂದಾಗ ಕ್ಷುಲ್ಲಕ ಕಾರಣಕ್ಕಾಗಿ ಉದ್ಭವಿಸಿದ ಜಗಳ ಕೊಲೆಯಲ್ಲಿ ಅಂತ್ಯವಾಯಿತು. ಇರಿತಕ್ಕೆ ತುತ್ತಾದ ಯುವಕನನ್ನು ವಿನಾಯಕ ದೋಂಗಡಿ ಎಂದು ಗುರುತಿಸಲಾಗಿದ್ದು ಈತ ನಗರದ ಗಣ್ಯ ವ್ಯಾಪಾರಿಯಾಬ್ಬರ ಮಗ ಎನ್ನಲಾಗಿದೆ. ಇರಿದ ಆರೋಪಿಯನ್ನು ವಿಜಯ್ ಮಾಂಡ್ರೇಕರ್ ಎಂದು ಪತ್ತೆ ಹಚ್ಚಲಾಗಿದ್ದು, ಈ ಸಂಬಂಧ ಮೂವರು ಯುವಕರನ್ನು ಬಂಧಿಸಲಾಗಿದೆ.
ಘಟನೆಯ ನಂತರ ಸ್ವಲ್ಪ ಹೊತ್ತು ನಗರದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಈ ದುರಂತದಲ್ಲಿ ಇನ್ನೂ ಮೂವರು ವ್ಯಕ್ತಿಗಳು ಬಲಿಯಾಗಿರುವುದಾಗಿ ವರದಿಯಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
(ಪಿಟಿಐ)
Comments
Story first published: Monday, September 3, 2001, 5:30 [IST]