30 ಮಂದಿ ಶಿಕ್ಷಕರಿಗೆ ರಾಜ್ಯಪ್ರಶಸ್ತಿ, ರಾಜ್ಯದ13 ಶಿಕ್ಷಕರಿಗೆರಾಷ್ಟ್ರ ಪ್ರಶಸ್ತಿ
ಬೆಂಗಳೂರು : ಈ ಬಾರಿಯ ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿಗೆ ಒಟ್ಟು 30 ಮಂದಿ ಶಿಕ್ಷಕರು ಆಯ್ಕೆಯಾಗಿದ್ದರೆ, ರಾಷ್ಟ್ರ ಪ್ರಶಸ್ತಿಗೆ, ರಾಜ್ಯದ 13 ಮಂದಿ ಶಿಕ್ಷಕರು ಆಯ್ಕೆಯಾಗಿದ್ದಾರೆ.
ಸೆಪ್ಟೆಂಬರ್ ಐದರ ಶಿಕ್ಷಕ ದಿನದಂದು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗುವುದು.
ಪ್ರಶಸ್ತಿ ವಿಜೇತ ಪ್ರಾಥಮಿಕ ಶಾಲಾ ಶಿಕ್ಷಕರು: ಎಂ.ಎಚ್. ಮಾಸನ್ಕಟ್ಟೆ, ನೆರಲಗಿ, ಸೊರಬ; ಎ. ಪಾಲಯ್ಯ- ಭೀಮಸಮುದ್ರ, ಜಗಳೂರು ತಾಲೂಕು, ಮದಲೇಟಿ ,ಜಕ್ಕೇನ ಹಳ್ಳಿ, ತುಮಕೂರು; ಎಚ್.ಎಸ್.ನಂಜಮ್ಮ, ಮಾಯಮುಡಿ, ವಿರಾಜಪೇಟೆ ; ಎಚ್.ಕೆ. ನಟರಾಜ, ಸ್ವಾಮಿ ವಿವೇಕಾನಂದ ಶಾಲೆ, ದೊಡ್ಡಬಳ್ಳಾಪುರ ; ದಿವಾಕರ ನಾಯಕ್, ಇಡ್ಯ, ಸುಳ್ಯ ; ಪಕೀರಪ್ಪ ಹನುಮಪ್ಪ ನಾಯಕ, ಹುಲುಕೋಟೆ, ಗದಗ.
ಎಂ. ಹುಸೇನಮ್ಮ; ಮೇದರವಾಡಿ, ಬಳ್ಳಾರಿ ; ಬಿ.ಬೋರೆಗೌಡ, ಮದ್ದೂರು, ಮಹಾಲಿಂಗಪ್ಪ ಶಿವಪುತ್ರಪ್ಪ ಮಹಾಲಮನಿ, ಅನುದಾನಿತ ಗೋಕಾಕ ಮಿಲ್ಸ್ ಪ್ರಾಥಮಿಕ ಶಾಲೆ, ಗೋಕಾಕ್, ಜನಾರ್ದನ ಬೈಕಾರ, ಸಹಾಯಕ ಶಿಕ್ಷಕ, ಶಹಪುರ , ಭೀಮಪ್ಪ ಧಾವರೆಪ ಲಮಾಣಿ, ಮುಖ್ಯಶಿಕ್ಷಕ, ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಮನಗೋಳಿ, ಬಸವನ ಬಾಗೇವಾಡಿ.
ಅಬ್ದುಲ್ ಅಜೀಜ್ ಕಾಲೇಸಾಹೇಬ ಮುಲ್ಲಾ, ದೈಹಿಕ ಶಿಕ್ಷಣ ಶಿಕ್ಷಕ, ಕೋಳೂರ, ಮುದ್ದೇಬಿಹಾಳ ; ಪೀಟರ್ ರಫಾಯಲ್ ಅರಾನ್ಹ, ಮುಖ್ಯಶಿಕ್ಷಕ, ಬೆಳ್ಳೆ ಚರ್ಚ್, ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಮೂಡುಬೆಳ್ಳೆ, ಉಡುಪಿ; ಎನ್.ಎಂ.ಸಂಜೀವಮ್ಮ, ಬಗ್ಗಸಗೋಡು, ಮೂಡಿಗೆರೆ; ಅಡೆವಪ್ಪ ಕಲ್ಲಪ್ಪ ಹಾದಿಮನಿ, ಮುಧೋಳ, ವಿಠಲ ಮಾರುತಿ ರಾವ್ ನಿಕ್ಕಂ ಬೆಳ್ಳಿಗಟ್ಟಿ, ಧಾರವಾಡ. ಸಿ.ಎಸ್.ದೊಡ್ಡಗೌಡರ್, ಕಲ್ಲ ದೇವರ, ಬ್ಯಾಡಗಿ, ಹಾವೇರಿ.
ನಾಗೇಶ ಮಾಸ್ತಿ ನಾಯಕ್, ವನ್ನಳ್ಳಿ, ಯು.ಮೂಕಾಂಬಿಕೆ, ಮಡಿಕೇರಿ. ಎ.ಎಂ. ಬೋರ್ಜೇಸ್, ಖಾನಾಪುರ, ಬೆಳಗಾವಿ, ಗೂಳಪ್ಪ ಗಂಗಪ್ಪ ಲೋಬೋಗೋಳ, ವಿಜಯನಗರ, ಹುಬ್ಬಳ್ಳಿ. ಕೆ.ಎಚ್.ಆನಂದ ರಾಜ್ , ಶ್ರೀ ಆದಿಚುಂಚನಗಿರಿ ಟ್ರಸ್ಟ್, ಮಾಯಸಂದ್ರ, ತುಮಕೂರು ; ಕೆ.ಅನುಸೂಯ, ಲೇಡಿಹಿಲ್ ಉರ್ವ, ಮಂಗಳೂರು. ಎಂ.ಇ.ಖಲೀಲುಲ್ಲಾ ಖಾನ್, ತೂಬುಗೆರೆ, ದೊಡ್ಡಬಳ್ಳಾಪುರ. ಕುಮಟ ; ದಾನಮ್ಮ ಶುಭಾಶ್ಚಂದ್ರ, ಆಸ್ಮೀಯ, ರಾಯಚೂರು.
ಪ್ರೌಢಶಾಲಾ ವಿಭಾಗ: ರಾಮಕೃಷ್ಣ ಸುಬ್ರಾಯ ಹೆಗಡೆ, ಬೈರುಂಬೆ, ಸಿರಸಿ; ಎಚ್.ಎ. ಶ್ರೀನಿವಾಸ, ಕಿಗ್ಗಾ, ಶೃಂಗೇರಿ ; ಕೆ.ಎಚ್.ಶಿವರಾಮೇಗೌಡ, ಕಲ್ಲುಕಟ್ಟಡ, ಮಂಡ್ಯ. ಕೆ.ಎನ್.ಗಣೇಶ್, ಶಿವಮೊಗ್ಗ.
ರಾಷ್ಟ್ರ ಪ್ರಶಸ್ತಿ ವಿಜೇತರು : ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ, ತೀರ್ಥಹಳ್ಳಿ ತಾಲೂಕು ಬಾಳೇಹಳ್ಳಿ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ಸುದೇಷ್ಣ ಕುಮಾರಿ, ನಂಜನಗೂಡಿನ ಪಾಂಡವಪುರ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎನ್. ಬಸವರಾಜು, ಉಡುಪಿಯ ಮಾಳಗ್ರಾಮದ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ಎಂ. ನಾಗಭೂಷಣ ಜೋಷಿ, ಪುತ್ತೂರಿನ ನೆಹರೂ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ. ಐತಪ್ಪನಾೖಕ್, ಚನ್ನರಾಯಪಟ್ಟಣ ಕಲ್ಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಿ. ಬೊಮ್ಮೇಗೌಡ, ಚಿಕ್ಕಮಗಳೂರಿನ ಬೇರುಕೋಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ಜೋಸೆಫಿನ್ ಮೇರಿ ಡಿ’ಮೆಲ್ಲೋ.
ಬ್ಯಾಡಗಿಯ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜನಕ ಹುಚ್ಚಪ್ಪ ಛಲವಾದಿ, ಬಿಜಾಪುರ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ಸುವರ್ಣ ಸಿದ್ದರಾಮಯ್ಯ ಹಾಗೂ ಗುಲ್ಬರ್ಗಾ ಶೇಕ್ ರೋಜಾ ರಸ್ತೆ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ಸೈಯ್ಯದ್ ಷಾ ರೆಹಮಾನ್ ಹುಸೇನಿ.
ಪ್ರೌಢ ಶಾಲೆ ವಿಭಾಗ: ತುಮಕೂರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎಂ.ಹನುಮದಾಸ್, ಚಿಕ್ಕಮ ಗಳೂರು ಜಿಲ್ಲೆ ಕೊಪ್ಪಾದ ಸಂತಜೋಸೆಫ್ ಪ್ರೌಢಶಾಲೆಯ ಸಿಸ್ಟರ್ ನೋನಿತ, ಕುಮಟಾದ ಶಾಂತಿಕಂಬ ಪ್ರೌಢಶಾಲೆಯ ದಿನಕರ ಮಾಧವ ಕಾಮತ್, ರಾಯಚೂರು ಕೆ.ಇ.ಬಿ ಕಾಲೋನಿ ಸರಕಾರಿ ಪ್ರೌಢ ಶಾಲೆಯ ಅಜೀಜಸಲ್ಮಾನ್.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications