ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ, ಬೆಳಗಾವಿಗೆ ಮತ್ತೆ ವಿಮಾನಹಾರಿಸಲು ಮುಖ್ಯಮಂತ್ರಿ ಪಟ್ಟು

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕೋದ್ಯಮದ ಅಭಿವೃದ್ಧಿಗಾಗಿ ಉತ್ತರ ಕರ್ನಾಟದ ಕೆಲವು ಜಿಲ್ಲೆಗಳಲ್ಲಿ ವಿಮಾನ ಯಾನ ಪ್ರಾರಂಭಿಸಲು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾತುರರಾಗಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ನಾಗರಿಕ ವಿಮಾನ ಸಚಿವಾಲಯದ ಕಾರ್ಯದರ್ಶಿ ಎ.ಎಚ್‌.ಜಂಗ್‌ ಅವರೊಟ್ಟಿಗೆ ಇತ್ತೀಚೆಗೆ ಚರ್ಚೆಯನ್ನೂ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಗೆ ಸಾಕಷ್ಟು ಹಣ ಸಂಗ್ರಹಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಬಳಕೆದಾರರಿಗೆ 100 ರುಪಾಯಿ ಶುಲ್ಕ ವಿಧಿಸಲು ಇನ್ನೊಂದು ತಿಂಗಳಲ್ಲಿ ಕೇಂದ್ರ ಸರ್ಕಾರ ಅನುಮತಿ ಕೊಡುವುದಾಗಿ ಜಂಗ್‌ ಭರವಸೆ ಕೊಟ್ಟರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಜಯರಾಂ ರಮೇಶ್‌ ಜೊತೆಯಲ್ಲಿ ಮುಖ್ಯಮಂತ್ರಿ ಕೃಷ್ಣ , ಜಂಗ್‌ ಅವರೊಟ್ಟಿಗೆ ಮಾತುಕತೆ ನಡೆಸಿದರು. ಐತಿಹಾಸಿಕ ಸ್ಥಳಗಳಾದ ಹಂಪಿ, ಬಿಜಾಪುರ ಹಾಗೂ ಗಣಿ ಉದ್ಯಮದ ಮೂಲಗಳನ್ನು ಹುದುಗಿಸಿಟ್ಟಿಕೊಂಡಿರುವ ಬಳ್ಳಾರಿಯಂಥಾ ಕೈಗಾರಿಕಾ ಪ್ರದೇಶಗಳು ಬೆಳಗಾವಿ ಮತ್ತು ಹುಬ್ಬಳ್ಳಿಗೆ ಹತ್ತಿರದಲ್ಲಿವೆ. ಹೀಗಾಗಿ ಪ್ರವಾಸೋದ್ಯಮ ಹಾಗೂ ಕೈಗಾರಿಕೋದ್ಯಮದ ಪ್ರಗತಿಗೆ ಬೆಳಗಾವಿ ಮತ್ತು ಹುಬ್ಬಳ್ಳಿಗಳಿಗೂ ವಿಮಾನ ಯಾನ ಪ್ರಾರಂಭಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿ ಮತ್ತು ಹುಬ್ಬಳ್ಳಿಗೆ ವಿಮಾನ ಸಂಚಾರ ಪ್ರಾರಂಭಿಸುವ ನಿಟ್ಟಿನಲ್ಲಿ ಜಂಗ್‌ 3 ಆಯ್ಕೆಗಳನ್ನು ಹೇಳಿದರು. ಅವೆಂದರೆ-

  • 50 ಸೀಟುಗಳ ವಿಮಾನವನ್ನು ರಾಜ್ಯ ಸರ್ಕಾರ ತನ್ನ ವ್ಯಾಪ್ತಿಗೆ ತಂದುಕೊಳ್ಳುವುದು (ಯುಪಿ ಏರ್‌ ಮತ್ತು ಗುಜರಾತ್‌ ಸರ್ಕಾರಗಳು ಈ ರೀತಿಯ ವಿಮಾನ ಸಂಚಾರ ಪ್ರಾರಂಭಿಸಿವೆ).
  • ತನೇಜ ಏರ್‌ವೇಸ್‌ ಅಥವಾ ಜೆಟ್‌ ಏರ್‌ವೇಸ್‌ನಂಥಾ ಖಾಸಗಿ ಸಂಸ್ಥೆಗಳೊಡನೆ ಜಂಟಿ ಒಪ್ಪಂದ ಮಾಡಿಕೊಳ್ಳುವುದು.
  • ಇಂಡಿಯನ್‌ ಏರ್‌ಲೈನ್ಸ್‌ನ ಸಬ್‌ಸಿಡರಿಯಾದ ಅಲಯನ್ಸ್‌ ಏರ್‌ನ ಮೂಲಕ ವಿಮಾನ ಯಾನ ಪ್ರಾರಂಭಿಸುವುದು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕೃಷ್ಣ, ತನೇಜ ಹಾಗೂ ಜೆಟ್‌ ಏರ್‌ವೇಸ್‌ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X