ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ್‌ಕುಮಾರ್‌ಗೆ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಖಾತೆ

By Staff
|
Google Oneindia Kannada News

ನವದೆಹಲಿ: ಶನಿವಾರ (ಸೆ.01) ನಡೆದ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಆರು ಹೊಸಮುಖಗಳಿಗೆ ಅವಕಾಶ ಮಾಡಿಕೊಟ್ಟಿರುವ ಪ್ರಧಾನಿ ವಾಜಪೇಯಿ, ರಾಮ್‌ ವಿಲಾಸ್‌ ಪಾಸ್ವಾನ್‌, ಅನಂತಕುಮಾರ್‌ ಹಾಗೂ ಶರದ್‌ ಯಾದವ್‌ ಅವರುಗಳ ಖಾತೆಗಳಲ್ಲೂ ಬದಲಾವಣೆ ಮಾಡಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ್‌ ಅವರಿಗೆ ನಗರಾಭಿವೃದ್ಧಿ ಹಾಗೂ ಬಡತನ ನಿರ್ಮೂಲನೆ ಖಾತೆಯನ್ನು ಪ್ರಧಾನಿ ವಹಿಸಿಕೊಟ್ಟಿದ್ದಾರೆ. ಶರದ್‌ ಯಾದವ್‌ ಅವರಿಗೆ ಕಾರ್ಮಿಕ ಖಾತೆ ದೊರೆತಿದ್ದರೆ, ರಾಂ ವಿಲಾಸ್‌ ಪಾಸ್ವಾನ್‌ ಅವರಿಗೆ ಗಣಿ ಮತ್ತು ಕಲ್ಲಿದ್ದಲು ಖಾತೆ ದೊರೆತಿದೆ. ಷೇರು ವಿಕ್ರಯ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆ ಸಚಿವ ಅರುಣ್‌ ಶೌರಿ ಅವರಿಗೆ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ದೊರೆತಿದೆ. ಸುಂದರಲಾಲ್‌ ಪಟ್ವಾ ಸೇರಿದಂತೆ 5 ಮಂದಿ ಪ್ರಧಾನಿಯವರ ಸಲಹೆ ಮೇರೆಗೆ ರಾಜೀನಾಮೆ ನೀಡಿದ್ದು, ಅವುಗಳನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಸಂಪುಟ ವಿಸ್ತರಣೆಯ ಮುಖ್ಯಾಂಶಗಳು-

  • ಕರಿಯ ಮುಂಡಾ- ಕೃಷಿ ಮತ್ತು ಗ್ರಾಮೀಣ ಉದ್ಯಮ
  • ವೇದ್‌ಪ್ರಕಾಶ್‌ ಗೋಯಲ್‌- ಹಡಗು ಉದ್ಯಮ
  • ವಿಜಯ್‌ ಗೋಯಲ್‌- ಪ್ರಧಾನಿಯವರ ಕಚೇರಿ, ಯೋಜನಾ ಖಾತೆ
  • ರಾಜೀವ್‌ಪ್ರತಾಪ್‌ ರುಡಿ- ವಾಣಿಜ್ಯ ಮತ್ತು ಉದ್ಯಮ
  • ಅಣ್ಣಾಸಾಹೇಬ ಪಾಟೀಲ- ಗ್ರಾಮೀಣಾಭಿವೃದ್ಧಿ
  • ರವಿಶಂಕರ ಪ್ರಸಾದ್‌- ಗಣಿ ಮತ್ತು ಕಲ್ಲಿದ್ದಲು
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X