ಅಯೋಧ್ಯೆಯ ಮಸೀದಿ ಅವಶೇಷಗಳಡಿ 12 ನೇ ಶತಮಾನದ ಶಾಸನ
ಪಾಟ್ನಾ : ಅಯೋಧ್ಯೆಯಲ್ಲಿ ಕೆಡವಿದ ಬಾಬರಿ ಮಸೀದಿಯ ಅವಶೇಷಗಳಡಿಯಲ್ಲಿ 12 ನೇ ಶತಮಾನದ ಶಾಸನವೊಂದು ಪತ್ತೆಯಾಗಿದ್ದು, ರಾಮಜನ್ಮಭೂಮಿ ಯಾರಿಗೆ ಸೇರಬೇಕು ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳುವಲ್ಲಿ ಈ ಶಿಲೆ ಮಹತ್ವದ ಪಾತ್ರ ವಹಿಸುತ್ತದೆಂದು ನಿರೀಕ್ಷಿಸಲಾಗಿದೆ.
ದೊರೆತಿರುವ ಶಾಸನದಲ್ಲಿ 20 ಸಾಲುಗಳ 30 ಸಂಸ್ಕೃತ ಶ್ಲೋಕಗಳಿವೆ. ಈ ಶಾಸನದ ಕಲ್ಲು ಭಗ್ನಗೊಂಡ ಬಾಬರಿ ಮಸೀದಿಯ ಗೋಡೆಯ ಕೆಳಭಾಗದಲ್ಲಿ ಪತ್ತೆಯಾಗಿದೆ. ಆದರೂ ರಾಮಜನ್ಮ ಭೂಮಿಯ ಸಮಸ್ಯೆ ಬಗೆಹರಿಸಲು ಸಂಘ ಪರಿವಾರದವರ ಕುತಂತ್ರ ಈ ಶಾಸನ ಎಂದೂ ಹೇಳಲಾಗಿದೆ.
ಈ ಶಾಸನವು ಸಮಸ್ಯೆಗೆ ಮಂಗಳ ಹಾಡಲಿದೆ ಎಂದು ತೀವ್ರವಾಗಿ ವಾದಿಸುತ್ತಿರುವ ಆಚಾರ್ಯ ಕಿಶೋರ್ ಕುನಾಲ್ ಇತ್ತೀಚೆಗೆ ಐಪಿಎಸ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಡರ್ಬಾಂಗ್ನ ಕಾಮೇಶ್ವರ್ ಸಿಂಘ್ ಸಂಸ್ಕೃತ ವಿಶ್ವ ವಿದ್ಯಾಲಯ ಉಪಕುಲಪತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಕುಮನಾಲ್ ಪ್ರಕಾರ ಈ ಶಾಸನದ ವಿವರಗಳನ್ನು ಯುನೆಸ್ಕೋದಂತಹ ಸಂಸ್ಥೆಗಳು ಅಧಿಕಾರಯುತವಾಗಿ ನೀಡಬಹುದು.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದ ಆದೇಶದ ಮೇರೆಗೆ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾದ ಈ ಶಾಸನದ ಕಲ್ಲು ತುಂಡು ತುಂಡಾಗಿದೆ. ಈವರೆಗೆ ಈ ಶಾಸನದ ಅವಶೇಷಗಳನ್ನು ಕೋರ್ಟ್ ಸೀಲ್ ರಾಮಕಥಾ ಕುಂಜ್ನಲ್ಲಿ ಇಟ್ಟಿತ್ತು. ರಾಮಕಥಾ ಕುಂಜ್ ಬಾಬರಿ ಮಸೀದಿ ಕೆಡವುದಕ್ಕೆ ಮೊದಲು ವಿಶ್ವ ಹಿಂದೂ ಪರಿಷತ್ ಕಾರ್ಯಾಲಯವಾಗಿದ್ದು ಪ್ರಸ್ತುತ ಸರಕಾರದ ಅಧೀನದಲ್ಲಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications